ಬೆಂಗಳೂರು: ಸ್ಯಾಂಡಲ್ ವುಡ್ ನ ಯುವ, ಪ್ರತಿಭಾವಂತ ಬರಹಗಾರ ಗುರು ಕಶ್ಯಪ್ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ.
Photo Courtesy: Twitter
ರಮೇಶ್ ಅರವಿಂದ್ ಅಭಿನಯದ ಸುಂದರಾಂಗ ಜಾಣ, ಪುಷ್ಪಕ ವಿಮಾನ, ಶಿವರಾಜ್ ಕುಮಾರ್ ಅಭಿನಯದ ಭೈರಾಗಿ ಸಿನಿಮಾ ಸೇರಿದಂತೆ 15 ಕ್ಕೂ ಹೆಚ್ಚು ಸಿನಿಮಾಗಳಿಗೆ ಬರಹಗಾರನಾಗಿ ಕೆಲಸ ಮಾಡಿದ್ದ ಗುರು ಕಶ್ಯಪ್ ಬೇಡಿಕೆಯ ಬರಹಗಾರರಾಗಿದ್ದರು.
ದಿಡೀರ್ ಅನಾರೋಗ್ಯಕ್ಕೊಳಗಾಗದ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸುವ ದಾರಿ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರ ಎಂದು ತಿಳಿದುಬಂದಿದೆ. ಅವರ ನಿಧನಕ್ಕೆ ನಟ ರಮೇಶ್ ಅರವಿಂದ್ ಸೇರಿದಂತೆ ಸ್ಯಾಂಡಲ್ ವುಡ್ ಕಂಬನಿ ಮಿಡಿದಿದೆ.