Select Your Language

Notifications

webdunia
webdunia
webdunia
webdunia

ಮಾಜಿ ಪತಿ ನಾಗಚೈತನ್ಯ ಮೇಲೆ ಕೋಪವಿದೆ, ಇಬ್ಬರನ್ನು ಒಂದೇ ಕೋಣೆಯಲ್ಲಿ ಹಾಕಿದರೆ ದೇವರೇ ಗತಿ ಎಂದ ಸಮಂತಾ!

ಮಾಜಿ ಪತಿ ನಾಗಚೈತನ್ಯ ಮೇಲೆ ಕೋಪವಿದೆ, ಇಬ್ಬರನ್ನು ಒಂದೇ ಕೋಣೆಯಲ್ಲಿ ಹಾಕಿದರೆ ದೇವರೇ ಗತಿ ಎಂದ ಸಮಂತಾ!
ಹೈದರಾಬಾದ್ , ಶುಕ್ರವಾರ, 22 ಜುಲೈ 2022 (09:30 IST)
ಹೈದರಾಬಾದ್: ಕಾಫಿ ವಿತ್ ಕರಣ್ ಶೋನಲ್ಲಿ ಪಾಲ್ಗೊಂಡ ನಟಿ ಸಮಂತಾ ಋತು ಪ್ರಭು ಮಾಜಿ ಪತಿ ನಾಗಚೈತನ್ಯ ಮತ್ತು ತಮ್ಮ ನಡುವಿನ ವಿರಸದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ನಾಗಚೈತನ್ಯ ಬಗ್ಗೆ ಈಗ ನಿಮ್ಮ ಭಾವನೆ ಏನು ಎಂಬ ಪ್ರಶ್ನೆಗೆ ಉತ್ತರಿಸಿರುವ ಸಮಂತಾ, ‘ನಾಗಚೈತನ್ಯ ಮೇಲೆ ನನಗೆ ಕೋಪವಿದೆ. ಒಂದು ವೇಳೆ ನಮ್ಮಿಬ್ಬರನ್ನು ಒಂದೇ ರೂಂನಲ್ಲಿ ಕೂಡಿ ಹಾಕಿ ಹರಿತ ಆಯುಧವೇನಾದರೂ ಇಟ್ಟರೆ ದೇವರೇ ಗತಿ’ ಎಂದಿದ್ದಾರೆ. ಆ ಮಟ್ಟಿಗೆ ಹಳೇ ಗಂಡನ ಮೇಲೆ ಧ್ವೇಷವಿರುವುದಾಗಿ ಹೇಳಿದ್ದಾರೆ.

ಸದ್ಯಕ್ಕೆ ನಮ್ಮ ನಡುವೆ ಸೌಹಾರ್ದಯುತ ಸಂಬಂಧವಿಲ್ಲ. ಭವಿಷ್ಯದಲ್ಲಿ ಗೊತ್ತಿಲ್ಲ ಎಂದಿದ್ದಾರೆ. ಇನ್ನು, ನಾಗಚೈತನ್ಯರಿಂದ ಬೇರೆಯಾದಾಗ ಕಠಿಣ ಪರಿಸ್ಥಿತಿ ಇತ್ತು. ಈಗ ನಾನು ಮತ್ತಷ್ಟು ಸ್ಟ್ರಾಂಗ್ ಆಗಿದ್ದೇನೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನ ಮದುವೆಗೆ ವಿಶಿಷ್ಟ ಆಮಂತ್ರಣ ಪತ್ರಿಕೆ