ಸರ್ಕಾರಕ್ಕೆ ರಾಕಿಂಗ್ ಸ್ಟಾರ್ ಯಶ್ ಸವಾಲು

Webdunia
ಸೋಮವಾರ, 20 ನವೆಂಬರ್ 2017 (09:03 IST)
ಬೆಂಗಳೂರು: ರಾಜನರಸಿಂಹ ಚಿತ್ರದ ಅಡಿಯೋ ಬಿಡುಗಡೆ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾಜ್ಯ ಸರ್ಕಾರಕ್ಕೇ ಸವಾಲೆಸೆದಿದ್ದಾರೆ.
 

ಅನಿರುದ್ಧ್ ಅಭಿನಯದ ರಾಜನರಸಿಂಹ ಚಿತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ರಿಕ್ರಿಯೇಟ್ ಮಾಡಿ ತೋರಿಸಲಾಗಿದೆ. ಈ ಚಿತ್ರದ ಅಡಿಯೋ ಬಿಡುಗಡೆಗೆ ಬಂದಿದ್ದ ಯಶ್, ವಿಷ್ಣುವರ್ಧನ್ ರನ್ನು ಸ್ಮರಿಸಿಕೊಂಡರು.

ಯಾವತ್ತಿದ್ದರೂ ಕರ್ನಾಟಕಕ್ಕೆ ಒಬ್ಬರೇ ‘ರಾಮಚಾರಿ’. ಅವರು ವಿಷ್ಣು ದಾದ. ನಾನು ರಾಮಚಾರಿ ಹೆಸರಿನಲ್ಲಿ ಸಿನಿಮಾ ಮಾಡಿರಬಹುದು. ಆದರೆ ಯಾವ ಕಾರಣಕ್ಕೂ ರಾಮಚಾರಿ ಅಲ್ಲ ಎಂದರು.

ಇದೆಲ್ಲದರ ನಡುವೆ ವಿಷ್ಣುವರ್ಧನ್ ಸ್ಮಾರಕ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಯಶ್ ಸರ್ಕಾರಕ್ಕೇ ಸವಾಲೆಸೆದರು. ವಿಷ್ಣುವರ್ಧನ್ ಅವರಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಅವರ ಸ್ಮಾರಕ ನಿರ್ಮಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿಮ್ಮ ಕೈಲಾಗದಿದ್ದರೆ ಹೇಳಿ. ನಾವು ಅಭಿಮಾನಿಗಳೇ ಸೇರಿಕೊಂಡು ನಿರ್ಮಿಸುತ್ತೇವೆ ಎಂದು ಯಶ್ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಾಮಾನ್ಯರಂತೆ ಕೇದಾರನಾಥ ಕ್ಷೇತ್ರಕ್ಕೆ ಚಾರಣ ಮಾಡಿ ಅನುಭವಿ ಹಂಚಿಕೊಂಡ ನಟ ಯುವ ರಾಜಕುಮಾರ್

ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್‌ಗೆ ಮಾತೃವಿಯೋಗ

ಬಾಬಿ ಜತೆಗಿನ ಪ್ರೀತಿ ಜೀವನದ ಅದ್ಭುತ ಘಳಿಗೆ: ಹಳೆ ಪ್ರೇಮಿ ಬಗ್ಗೆ ಪೂಜಾ ಭಟ್

ಸನಾತನ ಧರ್ಮವೇ ಜೀವನ ವಿಧಾನ: ಉದಯನಿಧಿ ಸ್ಟಾಲಿನ್ ವಿರುದ್ಧ ಸಿಡಿದೆದ್ದ ನಟ ಅರ್ಜುನ್ ಸರ್ಜಾ

ಬಾಲಿವುಡ್ ನಟ ನಟಿಯರ ಜತೆ ಉತ್ತಮ ಒಡನಾಟ ಹೊಂದಿದ್ದ ಕರಣ್ ಜೋಹರ್‌ ಹೀಗ್ಯಾಕೆ ನಡ್ಕೊಂಡ್ರು

ಮುಂದಿನ ಸುದ್ದಿ
Show comments