Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ತಂಡದವರಿಗೆ ವಿಮೆ ಭಾಗ್ಯ!

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ತಂಡದವರಿಗೆ ವಿಮೆ ಭಾಗ್ಯ!
Bangalore , ಭಾನುವಾರ, 26 ಮಾರ್ಚ್ 2017 (11:08 IST)
ಬೆಂಗಳೂರು: ಕಳೆದ ವರ್ಷ ದುನಿಯಾ ವಿಜಯ್ ಅಭಿನಯದ ಮಾಸ್ತಿ ಗುಡಿ ಚಿತ್ರದಲ್ಲಿ ನಡೆದ ದುರಂತ ಇನ್ನೂ ಸ್ಯಾಂಡಲ್ ವುಡ್ ಮರೆತಿಲ್ಲ. ಹೀಗಾಗಿ ಇಂತಹ ಯಾವುದೇ ಅನಾಹುತವಾದರೂ,  ಮುಂಜಾಗ್ರತಾ ಕ್ರಮವಾಗಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಜಿಎಫ್ ಚಿತ್ರ ತಂಡ ವಿಮೆ ನಡೆಸಿದೆ.

 

ಹೀಗಾಗಿ ಚಿತ್ರತಂಡದ ಎಲ್ಲರಿಗೂ ವಿಮೆ ಮಾಡಿಲಾಗಿದೆಯಂತೆ. ಸದ್ಯ ಕೋಲಾರದಲ್ಲಿ ಶೂಟಿಂಗ್ ಮುಂದುವರಿಸಿರುವ ಚಿತ್ರತಂಡ ಕಲಾವಿದರ ಸುರಕ್ಷತೆಗೆ ಕ್ರಮ ಕೈಗೊಂಡು ಮೆಚ್ಚುಗೆಗೆ ಪಾತ್ರವಾಗಿದೆ.

 
ಯಶ್ ಮತ್ತು ನಿರ್ಮಾಪಕ ವಿಜಯ್ ಇಂತಹದ್ದೊಂದು ಐಡಿಯಾ ಮಾಡಿದ್ದಾರಂತೆ. ಕಲಾವಿದರ, ತಂತ್ರಜ್ಞರ ಜೀವ ಎಲ್ಲಕ್ಕಿಂತ ಮುಖ್ಯ. ಹಾಗಾಗಿ ನಾವಿಬ್ಬರು ಚರ್ಚಿಸಿ ಇಂತಹದ್ದೊಂದು ಸುರಕ್ಷತಾ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಯಶ್ ಹೇಳಿಕೊಂಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

`ಯೋಗಿ ಆದಿತ್ಯನಾಥ್ ಗ್ಯಾಸ್ ರಿಲೀಸಿಂಗ್ ಯೋಗ ಮಾಡಲಿ’