Webdunia - Bharat's app for daily news and videos

Install App

ರಾಕಿಂಗ್ ಸ್ಟಾರ್ ಯಶ್ ಜಮೀನು ವಿವಾದ ಅಂತ್ಯ

Webdunia
ಬುಧವಾರ, 17 ಮಾರ್ಚ್ 2021 (10:32 IST)
ಬೆಂಗಳೂರು: ಹಾಸನದಲ್ಲಿ ರಾಕಿಂಗ್ ಸ್ಟಾರ್ ಯಶ್ ಖರೀದಿಸಿದ್ದ ಫಾರ್ಮ್ ಹೌಸ್ ಗೆ ರಸ್ತೆ ನಿರ್ಮಿಸುವ ಕುರಿತಾಗಿ ಎದ್ದಿದ್ದ ವಿವಾದ ಸುಖಾಂತ್ಯಗೊಂಡಿದೆ.


ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರದಲ್ಲಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ರಾಕಿ ಭಾಯ್ ತಂದೆ-ತಾಯಿ ಹಾಗೂ ಅವರ ಬೆಂಬಲಿಗರ ನಡುವೆ ಕೆಲವು ದಿನಗಳ ಹಿಂದೆ ವಾಗ್ವಾದವಾಗಿತ್ತು. ಈ ಸಂಬಂಧ ಯಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಇದೀಗ ಗ್ರಾಮದ ದೇವಾಲಯದಲ್ಲಿ ನಡೆದ ರಾಜೀ ಪಂಚಾಯ್ತಿಯಲ್ಲಿ ಎಲ್ಲವನ್ನೂ ಮಾತುಕತೆ ಮೂಲಕ ಪರಿಹರಿಸಿಕೊಳ್ಳಲಾಗಿದೆ. ಯಶ್ ಇಲ್ಲಿ ಜಮೀನು ಖರೀದಿಸಿರುವುದು ನಮಗೆ ಹೆಮ್ಮೆಯ ವಿಚಾರ. ಸಂವಹನದ ಕೊರತೆಯಿಂದ ಇಷ್ಟೆಲ್ಲಾ ರದ್ದಾಂತವಾಗಿದೆ. ರಸ್ತೆ ನಿರ್ಮಾಣಕ್ಕೆ ಜಮೀನು ಕೊಟ್ಟು ಬಿಡಲು ಸಿದ್ಧ ಎಂದು ಗ್ರಾಮದ ಮುಖಂಡರು ಒಪ್ಪಿಗೆ ನೀಡಿದ್ದಾರೆ.

ಇನ್ನು, ಯಶ್ ಕೂಡಾ ರೈತರಿಗೆ ಅನುಕೂಲವಾಗುತ್ತದೆ ಎಂದಾದರೆ 10 ಎಕರೆ ಜಮೀನು ಕೊಡಲೂ ಸಿದ್ಧ ಎಂದಿದ್ದರು. ಅದರಂತೆ ಎಲ್ಲವನ್ನೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿವಾಹದ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾದ ಕಪ್ಪು ಸುಂದರಿ ಸ್ಯಾನ್ ರೆಚಲ್‌, ಸಾವಿನ ಸುತ್ತಾ ಹಲವು ಅನುಮಾನ

ಬಿ ಸರೋಜಾದೇವಿ ಕೊನೆಯ ಕ್ಷಣದಲ್ಲಿ ಏನಾಯ್ತು ಇಲ್ಲಿದೆ ವಿವರ

ಹಿಂದೂ ದೇವರ ಮೇಲೆ ಉಚ್ಚೆ, ಕಕ್ಕ ಮಾಡ್ತೀನಿ ಎಂದವನ ಸ್ನೇಹ ಬೇಕಾ: ಯೋಗರಾಜ್ ಭಟ್ ಟ್ರೋಲ್

ಹಿರಿಯ ನಟಿ ಬಿ ಸರೋಜಾ ದೇವಿ ಇನ್ನಿಲ್ಲ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕಾಗಿ ಕತೆ ಮುಗಿಸುತ್ತಿದೆ ಜನಪ್ರಿಯ ಧಾರವಾಹಿ

ಮುಂದಿನ ಸುದ್ದಿ
Show comments