ಇದ್ದಕ್ಕಿದ್ದಂತೆ ಕಾಂತಾರ ಚಾಪ್ಟರ್ 1 ಶೂಟಿಂಗ್ ನಿಲ್ಲಿಸಿದ ರಿಷಬ್ ಶೆಟ್ಟಿ, ಕಾರಣವೇನು

Krishnaveni K
ಮಂಗಳವಾರ, 9 ಜುಲೈ 2024 (16:57 IST)
ಕುಂದಾಪುರ: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಬಗ್ಗೆ ಅಭಿಮಾನಿಗಳು ಕಾತುರದಿಂದ ಎದಿರು ನೋಡುತ್ತಿದ್ದಾರೆ.  ಆದರೆ ಇದೀಗ ಕುಂದಾಪುರದಲ್ಲಿ ನಡೆಯುತ್ತಿದ್ದ ಸಿನಿಮಾ ಚಿತ್ರೀಕರಣವನ್ನು ರಿಷಬ್ ಶೆಟ್ಟಿ ಇದ್ದಕ್ಕಿದ್ದಂತೆ ನಿಲ್ಲಿಸಿದ್ದಾರೆ. ಅದಕ್ಕೆ ಕಾರಣವೇನು ನೋಡಿ.

ಕಳೆದ ಕೆಲವು ಸಮಯದಿಂದ ರಿಷಬ್ ಶೆಟ್ಟಿ ತಮ್ಮ ತವರು ಕುಂದಾಪುರದಲ್ಲಿಯೇ ಬೀಡುಬಿಟ್ಟಿದ್ದಾರೆ. ತಮ್ಮ ಮಕ್ಕಳನ್ನೂ ಕುಂದಾಪುರದಲ್ಲಿಯೇ ಶಾಲೆಗೆ ಸೇರಿಸಿದ್ದಾರೆ. ಫ್ಯಾಮಿಲಿ ಸಮೇತ ಕುಂದಾಪುರಕ್ಕೆ ಶಿಫ್ಟ್ ಆಗಿರುವ ರಿಷಬ್ ಇದ್ದಕ್ಕಿಂತೆ ಶೂಟಿಂಗ್ ಸ್ಥಗಿತಗೊಳಿಸಲು ಕಾರಣವೇನು?

ಕಳೆದ ಒಂದು ವಾರದಿಂದ ಉಡುಪಿ-ಕುಂದಾಪುರ ಕಡೆ ವಿಪರೀತ ಮಳೆಯಾಗುತ್ತಿದೆ. ಕರಾವಳಿಯಲ್ಲಿ ಮಳೆ ಎಂದರೆ ಗೊತ್ತಲ್ಲ? ಬಿಟ್ಟೂ ಬಿಡದೇ ಸುರಿಯುವ ಮಳೆಯಿಂದಾಗಿ ಶೂಟಿಂಗ್ ಗೆ ತೊಂದರೆಯಾಗುತ್ತಿದೆ. ಚಿತ್ರೀಕರಣಕ್ಕಾಗಿ ರಿಷಬ್ ವಿಶೇಷ ಸೆಟ್ ಹಾಕಿಸಿದ್ದಾರೆ. ಭಾರೀ ಮಳೆಯಿಂದ ಚಿತ್ರೀಕರಣ ನಡೆಸಲೂ ಸಾಧ್ಯವಾಗದ ಪರಿಸ್ಥಿತಿಯಿದೆ.

ಹೀಗಾಗಿ ಇದೀಗ ಮಳೆ ಮುಗಿಯುವವರೆಗೆ ಕಾಂತಾರ ಚಾಪ್ಟರ್ 1 ಶೂಟಿಂಗ್ ಗೆ ಬ್ರೇಕ್ ಕೊಡಲು ರಿಷಬ್ ತೀರ್ಮಾನಿಸಿದ್ದಾರೆ. ಮಳೆ ಮುಗಿದ ಬಳಿಕ ಶೂಟಿಂಗ್ ಮತ್ತೆ ಮುಂದುವರಿಯಲಿದೆ. ಕಾಂತಾರ ಸಿನಿಮಾ ಸಕ್ಸಸ್ ಆದ ಬಳಿಕ ಹೊಂಬಾಳೆ ಫಿಲಂಸ್ ಎರಡನೇ ಭಾಗ ನಿರ್ಮಾಣಕ್ಕೆ ಮುಂದಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಚ್ಚು ಹಿಡಿದು ಶೋಕಿ ಮಾಡಿ ಜೈಲು ಸೇರಿದ್ದ ರಜತ್‌ಗೆ ಇದೀಗ ಮತ್ತೇ ಸಂಕಷ್ಟ

ನಿರ್ಮಾಪಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ, ಮಹತ್ವದ ಬೆಳವಣಿಗೆ

ಸಿಗರೇಟು ಸೇದುತ್ತಿದ್ದ ಸಿಹಿಕಹಿ ಚಂದ್ರು ಅಣ್ಣಾವ್ರ ಆ ಮಾತು ಕೇಳಿ ಮಾಡಿದ್ದೇನು

ನಟ ಮೋಹನ್ ಬಾಬು, ಪುತ್ರನ ವಿರುದ್ಧ ಇದೆಂಥಾ ಗಂಭೀರ ಆರೋಪ, ಏನಿದು ಪ್ರಕರಣ

ಪಾಕ್‌ನಲ್ಲಿ ಪ್ರದರ್ಶನಗೊಳ್ಳದ ಧುರಂದರ್‌ ಸಿನಿಮಾಗೆ ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್‌

ಮುಂದಿನ ಸುದ್ದಿ
Show comments