Select Your Language

Notifications

webdunia
webdunia
webdunia
webdunia

‘ಹೀರೋ’ ಅಗ್ನಿ ಆಕಸ್ಮಿಕ ಎಲ್ಲಾ ಗಿಮಿಕ್ ಎಂದವರಿಗೆ ರಿಷಬ್ ಶೆಟ್ಟಿ ಪ್ರತ್ಯುತ್ತರ

‘ಹೀರೋ’ ಅಗ್ನಿ ಆಕಸ್ಮಿಕ ಎಲ್ಲಾ ಗಿಮಿಕ್ ಎಂದವರಿಗೆ ರಿಷಬ್ ಶೆಟ್ಟಿ ಪ್ರತ್ಯುತ್ತರ
ಬೆಂಗಳೂರು , ಗುರುವಾರ, 4 ಮಾರ್ಚ್ 2021 (09:56 IST)
ಬೆಂಗಳೂರು: ಹೀರೋ ಸಿನಿಮಾದ ಚಿತ್ರೀಕರಣ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ತಾನು ಕೂದಲೆಳೆಯಲ್ಲಿ ಅಪಾಯದಿಂದ ಪಾರಾದ ಘಟನೆ ಬಗ್ಗೆ ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೇಳಿಕೊಂಡಿದ್ದರು.


ಈ ಘಟನೆ ಜುಲೈನಲ್ಲಿ ನಡೆದರೂ ಈಗ ಸಿನಿಮಾ ಬಿಡುಗಡೆಗೆ ಮುನ್ನ ಬಹಿರಂಗಗೊಳಿಸಿರುವುದು ಎಲ್ಲಾ ಪ್ರಚಾರದ ಗಿಮಿಕ್ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದರು.

ಈ ಟ್ರೋಲ್ ಗಳಿಗೆ ಉತ್ತರಿಸಿರುವ ರಿಷಬ್ ‘ಇದೆಲ್ಲಾ ಗಿಮಿಕ್ ಆಗಿದ್ದರೆ ಟ್ರೈಲರ್ ರಿಲೀಸ್ ವೇಳೆಯೇ ಹೇಳಿಕೊಳ್ಳುತ್ತಿದ್ದೆವು. ಇದನ್ನು ಬಳಸಿಕೊಂಡು ಸಿನಿಮಾಗೆ ಪ್ರಚಾರ ಪಡೆಯುವ ಅಗತ್ಯವಿಲ್ಲ. ಸಿನಿಮಾ ಪ್ರಚಾರಕ್ಕೆ ಮಾಧ್ಯಮಗಳಿಗೆ ಕೆಲವು ಕ್ಲಿಪ್ಪಿಂಗ್ ಕೊಡುವಾಗ ಈ ವಿಡಿಯೋ ಕೂಡಾ ಅವರ ಕೈಸೇರಿದೆ ಅಷ್ಟೇ ಎಂದು ರಿಷಬ್ ಸ್ಪಷ್ಟನೆ ಕೊಟ್ಟಿದ್ದಾರೆ. ಇದೇ ವಾರಾಂತ್ಯಕ್ಕೆ ಹೀರೋ ಬಿಡುಗಡೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಪಾಠಶಾಲ’ ಹಾಡಿಗೆ ಫಿದಾ ಆಗದವರು ಯಾರು ಹೇಳಿ?