Webdunia - Bharat's app for daily news and videos

Install App

ರತ್ನಮಂಜರಿ: ಟೆಂಟ್ ಸಿನಿಮಾದಿಂದ ಬಂದ ನಾಯಕ ನಾಯಕಿ!

Webdunia
ಶನಿವಾರ, 11 ಮೇ 2019 (17:48 IST)
ರಾಜ್ ಚರಣ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ರತ್ನಮಂಜರಿ. ಹಾಡು, ಟೈಲರ್ ಗಳ ಮೂಲಕ ಭರ್ಜರಿಯಾಗಿಯೇ ಟಾಕ್ ಕ್ರಿಯೇಟ್ ಮಾಡಿರೋ ಈ ಸಿನಿಮಾ ಇದೇ ಹದಿನೇಳನೇ ತಾರೀಕಿನಂದು ತೆರೆ ಕಾಣುತ್ತಿದೆ.

ಈ ಚಿತ್ರದ ಹಿಂದೆ ಪ್ರತಿಭಾವಂತ ಯುವಕರದ್ದೊಂದು ತಂಡವೇ ಇದೆ. ಇವರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ತರಬೇತಿ ಪಡೆದುಕೊಂಡು, ಸಿನಿಮಾ ಕನಸಿನ ಹಾದಿಯಲ್ಲಿ ಸಾಗಿ ಬಂದವರೇ.
ವಿಶೇಷವೆಂದರೆ, ಈ ಚಿತ್ರದ ನಾಯಕ ರಾಜ್ ಚರಣ್ ಮತ್ತು ನಾಯಕಿಯರಲ್ಲೊಬ್ಬರಾಗಿರೋ ಅಖಿಲಾ ಪ್ರಕಾಶ್ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಗರಡಿಯಲ್ಲಿ ಪಳಗಿಕೊಂಡವರು. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಸಂಸ್ಥೆಯಿಂದ ಈ ವರೆಗೂ ಚಿತ್ರರಂಗಕ್ಕೆ ಹಲವಾರು ಪ್ರತಿಭಾನ್ವಿತರು ಆಗಮಿಸಿದ್ದಾರೆ. ನಾನಾ ವಿಭಾಗಗಳಲ್ಲಿ ನೆಲೆಯನ್ನೂ ಕಂಡುಕೊಂಡಿದ್ದಾರೆ. ಈ ಸಾಲಿನಲ್ಲಿ ರಾಜ್ ಚರಣ್ ಮತ್ತು ಅಖಿಲಾ ಕೂಡಾ ಸೇರಿಕೊಳ್ಳೋದು ಗ್ಯಾರೆಂಟಿ.
ಯಾಕೆಂದರೆ ರತ್ನಮಂಜರಿಯಲ್ಲಿ ಪ್ರತೀ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವಂಥಾ ಪಾತ್ರವೇ ರಾಜ್ ಚರಣ್ ಮತ್ತು ಅಖಿಲಾ ಅವರುಗಳಿಗೆ ಸಿಕ್ಕಿದೆ. ರಾಜ್ ಚರಣ್ ಅವರಿಗಂತೂ ಮೊದಲ ಚಿತ್ರದಲ್ಲಿಯೇ ಸವಾಲಿನ ಪಾತ್ರವೇ ಸಿಕ್ಕಂತಾಗಿದೆ. ಅವರ ಪಾತ್ರಕ್ಕೆ ಬೇರೆ ಬೇರೆ ರೀತಿಯ ಶೇಡುಗಳಿವೆಯಂತೆ.


ಪಳಗಿದ ನಟರು ಮಾತ್ರವೇ ನಿಭಾಯಿಸುವಂಥಾ ಪಾತ್ರಕ್ಕೆ ಅವರು ಜೀವ ತುಂಬಿದ್ದಾರಂತೆ. ಅಂತೂ ರಾಜ್ ಚರಣ್ ಮತ್ತು ಅಖಿಲಾ ಪ್ರಕಾಶ್ ಮೂಲಕ ಮತ್ತಿಬ್ಬರು ನಾಗತಿಹಳ್ಳಿ ಗರಡಿಯ ಪ್ರತಿಭೆಗಳ ಆಗಮನವಾದಂತಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments