ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ, ಇದೀಗ ನ್ಯಾಶನಲ್ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಟಿ ರಶ್ಮಿಕಾ ಮಂದಣ್ಣ ಈಚೆಯೆ ಚೆನ್ನೈ ಮೇಲಿನ ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ನಟಿ, ತಮಿಳು ಚಿತ್ರ ಕುಬೇರಾ ಪ್ರಚಾರವನ್ನು ಪ್ರಾರಂಭಿಸಿರುವುದಾಗಿ ಹೇಳಿದ್ದಾರೆ. "ನಾವು ನಮ್ಮ ಕುಬೇರಾ ಪ್ರಚಾರಗಳನ್ನು ಚೆನ್ನೈನಲ್ಲಿ ಪ್ರಾರಂಭಿಸಿದ್ದೇವೆ, ಮತ್ತು ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿರುವಂತೆ, ನನ್ನ ಬಾಲ್ಯದ ಕಾರಣದಿಂದಾಗಿ ಚೆನ್ನೈ ನನ್ನ ಹೃದಯದಲ್ಲಿ ಬಹಳ ಪ್ರೀತಿಯ ಸ್ಥಾನವನ್ನು ಹೊಂದಿದೆ, ಆದ್ದರಿಂದ ನಾನು ತುಂಬಾ ಸಂತೋಷಪಟ್ಟೆ. ಹಾಗೆ ಹೇಳುತ್ತಾ.. ನಾನು ಆ ದಿನ ತುಂಬಾ ನಕ್ಕಿದ್ದೆ.. ಓ ದೇವರೇ.. ಎಂತಹ ಅದ್ಭುತ ಸಂಜೆಯಾಗಿತ್ತು! ಎಂದು ನಟಿ ತನ್ನ ಚೆನ್ನೈನ ಜತೆಗಿನ ನಂಟಿನ ಬಗ್ಗೆ ಬಿಚ್ಚಿಟ್ಟಿದ್ದಾಳೆ.
ಹ್ಯಾಪಿ ಡೇಸ್ ಖ್ಯಾತಿಯ ಶೇಖರ್ ಕಮ್ಮುಲ ನಿರ್ದೇಶನದ ಮುಂಬರುವ ಚಿತ್ರದಲ್ಲಿ ತೆಲುಗು ಸೂಪರ್ಸ್ಟಾರ್ ನಾಗಾರ್ಜುನ, ಜಿಮ್ ಸರ್ಭ್, ದಲಿಪ್ ತಾಹಿಲ್, ಸಯಾಜಿ ಶಿಂಧೆ ಮತ್ತು ಇತರರು ತಾರಾಗಣದಲ್ಲಿದ್ದಾರೆ. ತಮಿಳು ಚಿತ್ರ ಜೂನ್ 20 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.