Webdunia - Bharat's app for daily news and videos

Install App

ರಾಂಧವನಿಗೂ ಶ್ರೀಲಂಕೆಗೂ ಇದೆಂಥಾ ನಂಟು?

Webdunia
ಮಂಗಳವಾರ, 13 ಆಗಸ್ಟ್ 2019 (16:09 IST)
ಭುವನ್ ಪೊನ್ನಣ್ಣ ನಾಯಕನಾಗಿ ನಟಿಸಿರೋ ರಾಂಧವ ಚಿತ್ರದ ಹಿನ್ನೆಲೆಯಲ್ಲಿ ವಿಶೇಷತೆ ಮತ್ತು ಬೆರಗುಗಳ ಸಂತೆಯೇ ನೆರೆದಿದೆ. ಅದರಲ್ಲಿಯೂ ಈ ಕಥೆಯ ಬಗ್ಗೆ ನಿರ್ದೇಶಕ ಸುನೀಲ್ ಆಚಾರ್ಯ ಈವರೆಗೆ ಬಿಟ್ಟುಕೊಟ್ಟಿರೋ ಒಂದಷ್ಟು ವಿಚಾರಗಳಂತೂ ನಿಜಕ್ಕೂ ರೋಚಕವಾಗಿವೆ. ಅವುಗಳ ಸಾಲಿನಲ್ಲಿ ರಾಂಧವನ ಕಥೆಗೂ ದೂರದ ದೇಶ ಶ್ರೀಲಂಕೆಗೂ ಇರುವ ನಂಟಿನ ಕಥೆಯೂ ಸೇರಿಕೊಂಡಿದೆ.
ರಾಂಧವನದ್ದೊಂದು ವಿರಳವಾದ, ವಿಶೇಷವಾದ ಕಥೆ ಎಂಬ ಸುಳಿವು ಈಗಾಗಲೇ ಸಿಕ್ಕಿ ಬಿಟ್ಟಿದೆ. ಆದರೆ ಇದರ ಒಂದೆಳೆ ಕಥೆಗೂ ಶ್ರೀಲಂಕಾದ ಮಹಾ ಕಾವ್ಯವೊಂದಕ್ಕೂ ನೇರಾ ನೇರಾ ನಂಟಿದೆ. ನಮ್ಮಲ್ಲಿ ರಾಮಾಯಣ, ಮಹಾಭಾರತದಂಥಾ ಮಹಾ ಕಾವ್ಯಗಳಿದ್ದಾವಲ್ಲಾ? ಅದರಂತೆಯೇ ಶ್ರೀಲಂಕಾದಲ್ಲ್ಲಿಯೂ ಇಂಥಾದ್ದೇ ಮಹಾಕಾವ್ಯವಿದೆಯಂತೆ. ಆ ದೇಶದಲ್ಲಿ ಪೂಜ್ಯನೀಯ ಭಾವ ಹೊಂದಿರೋ ಆ ಮಹಾಕಾವ್ಯದ ಒಂದೆಳೆಯೊಂದಿಗೆ ರಾಂಧವನ ಕಥೆ ಹೊಸೆಯಲಾಗಿದೆಯಂತೆ.
ಹಾಗಂತ ಈ ಚಿತ್ರವೇನು ಆ ಮಹಾಕಾವ್ಯಾಧಾರಿತವಲ್ಲ. ಅದರಲ್ಲಿ ಮಜವಾದ ಒಂದೆಳೆ ಮಾತ್ರ ಇಲ್ಲಿದೆ. ಆ ಕಥೆಯಲ್ಲಿ ಗೂಬೆ ಸೇರಿದಂತೆ ನಾನಾ ಸೆಳೆತಗಳಿವೆ. ರಾಂಧವನೆಂಬೋ ರಾಜನ ಆಸ್ಥಾನ ಮತ್ತು ಅದರ ಆಚೀಚೆ ನಡೆಯೋ ವಿದ್ಯಮಾನಗಳು ಕೂಡಾ ಮಾಮೂಲಿ ಪೌರಾಣಿಕ ಕಥೆಗಳಿಗಿಂತಲೂ ವಿಭಿನ್ನವಾಗಿದೆ. ಇಂಥಾ ಕಥಾ ಎಳೆಯಲ್ಲಿಯೇ ಮೂರು ಶೇಡಿನ ಪಾತ್ರಗಳು ಬಿಚ್ಚಿಕೊಳ್ಳುತ್ತವೆ. ಅದರಂತೆ ಭುವನ್ ರಾಣಾ, ರಾಜ ರಾಂಧವ ಮತ್ತು ರಾಬರ್ಟ್ ಎಂಬ ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಒಂದೆಳೆಯ ಸುಳಿವೇ ಇಷ್ಟು ಮಜವಾಗಿರುವಾಗ ಇಡೀ ಚಿತ್ರ ಅದೆಂಥಾ ಮುದ ನೀಡಬಹುದೆಂಬುದು ಯಾರಿಗಾದರೂ ಅರ್ಥವಾಗುವಂತಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments