ರಾಂಧವನಿಗೂ ಶ್ರೀಲಂಕೆಗೂ ಇದೆಂಥಾ ನಂಟು?

Webdunia
ಮಂಗಳವಾರ, 13 ಆಗಸ್ಟ್ 2019 (16:09 IST)
ಭುವನ್ ಪೊನ್ನಣ್ಣ ನಾಯಕನಾಗಿ ನಟಿಸಿರೋ ರಾಂಧವ ಚಿತ್ರದ ಹಿನ್ನೆಲೆಯಲ್ಲಿ ವಿಶೇಷತೆ ಮತ್ತು ಬೆರಗುಗಳ ಸಂತೆಯೇ ನೆರೆದಿದೆ. ಅದರಲ್ಲಿಯೂ ಈ ಕಥೆಯ ಬಗ್ಗೆ ನಿರ್ದೇಶಕ ಸುನೀಲ್ ಆಚಾರ್ಯ ಈವರೆಗೆ ಬಿಟ್ಟುಕೊಟ್ಟಿರೋ ಒಂದಷ್ಟು ವಿಚಾರಗಳಂತೂ ನಿಜಕ್ಕೂ ರೋಚಕವಾಗಿವೆ. ಅವುಗಳ ಸಾಲಿನಲ್ಲಿ ರಾಂಧವನ ಕಥೆಗೂ ದೂರದ ದೇಶ ಶ್ರೀಲಂಕೆಗೂ ಇರುವ ನಂಟಿನ ಕಥೆಯೂ ಸೇರಿಕೊಂಡಿದೆ.
ರಾಂಧವನದ್ದೊಂದು ವಿರಳವಾದ, ವಿಶೇಷವಾದ ಕಥೆ ಎಂಬ ಸುಳಿವು ಈಗಾಗಲೇ ಸಿಕ್ಕಿ ಬಿಟ್ಟಿದೆ. ಆದರೆ ಇದರ ಒಂದೆಳೆ ಕಥೆಗೂ ಶ್ರೀಲಂಕಾದ ಮಹಾ ಕಾವ್ಯವೊಂದಕ್ಕೂ ನೇರಾ ನೇರಾ ನಂಟಿದೆ. ನಮ್ಮಲ್ಲಿ ರಾಮಾಯಣ, ಮಹಾಭಾರತದಂಥಾ ಮಹಾ ಕಾವ್ಯಗಳಿದ್ದಾವಲ್ಲಾ? ಅದರಂತೆಯೇ ಶ್ರೀಲಂಕಾದಲ್ಲ್ಲಿಯೂ ಇಂಥಾದ್ದೇ ಮಹಾಕಾವ್ಯವಿದೆಯಂತೆ. ಆ ದೇಶದಲ್ಲಿ ಪೂಜ್ಯನೀಯ ಭಾವ ಹೊಂದಿರೋ ಆ ಮಹಾಕಾವ್ಯದ ಒಂದೆಳೆಯೊಂದಿಗೆ ರಾಂಧವನ ಕಥೆ ಹೊಸೆಯಲಾಗಿದೆಯಂತೆ.
ಹಾಗಂತ ಈ ಚಿತ್ರವೇನು ಆ ಮಹಾಕಾವ್ಯಾಧಾರಿತವಲ್ಲ. ಅದರಲ್ಲಿ ಮಜವಾದ ಒಂದೆಳೆ ಮಾತ್ರ ಇಲ್ಲಿದೆ. ಆ ಕಥೆಯಲ್ಲಿ ಗೂಬೆ ಸೇರಿದಂತೆ ನಾನಾ ಸೆಳೆತಗಳಿವೆ. ರಾಂಧವನೆಂಬೋ ರಾಜನ ಆಸ್ಥಾನ ಮತ್ತು ಅದರ ಆಚೀಚೆ ನಡೆಯೋ ವಿದ್ಯಮಾನಗಳು ಕೂಡಾ ಮಾಮೂಲಿ ಪೌರಾಣಿಕ ಕಥೆಗಳಿಗಿಂತಲೂ ವಿಭಿನ್ನವಾಗಿದೆ. ಇಂಥಾ ಕಥಾ ಎಳೆಯಲ್ಲಿಯೇ ಮೂರು ಶೇಡಿನ ಪಾತ್ರಗಳು ಬಿಚ್ಚಿಕೊಳ್ಳುತ್ತವೆ. ಅದರಂತೆ ಭುವನ್ ರಾಣಾ, ರಾಜ ರಾಂಧವ ಮತ್ತು ರಾಬರ್ಟ್ ಎಂಬ ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಒಂದೆಳೆಯ ಸುಳಿವೇ ಇಷ್ಟು ಮಜವಾಗಿರುವಾಗ ಇಡೀ ಚಿತ್ರ ಅದೆಂಥಾ ಮುದ ನೀಡಬಹುದೆಂಬುದು ಯಾರಿಗಾದರೂ ಅರ್ಥವಾಗುವಂತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿಯೇ ಪ್ರಮುಖ ಟಾರ್ಗೆಟ್‌: ಮತ್ತೊರ್ವ ಮಹಿಳಾ ಸ್ಪರ್ಧಿ ಕಿರಿಕ್‌

ಕಿಚ್ಚ ಸುದೀಪ್ ಗೆ ಈ ವಿಚಾರದಲ್ಲಿ ಬಲವಂತ ಮಾಡಿದ್ದೇ ಪತ್ನಿ ಪ್ರಿಯಾ

ಬೆಳಕಿಲ್ಲದ ದೀಪಾವಳಿಯೊಂದಿಗೆ ನಟ ದರ್ಶನ್‌ಗೆ ಬೆನ್ನು ನೋವಿನ ಸಂಕಟ

ಮುಂದಿನ ಸುದ್ದಿ
Show comments