ದರ್ಶನ್ ಅರೆಸ್ಟ್ ಬೆನ್ನಲ್ಲೇ ಗಮನ ಸೆಳೆದ ರಕ್ಷಿತಾ ಪ್ರೇಮ್ ಟೆಂಪಲ್ ರನ್

Krishnaveni K
ಶನಿವಾರ, 22 ಜೂನ್ 2024 (11:39 IST)
Photo Credit: Instagram
ಬೆಂಗಳೂರು: ದರ್ಶನ್ ಮತ್ತು ರಕ್ಷಿತಾ ಪ್ರೇಮ್ ಮಧ್ಯೆ ಎಂಥಾ ಆತ್ಮೀಯ ಸ್ನೇಹವಿದೆ ಎಂದು ಎಲ್ಲರಿಗೂ ಗೊತ್ತು. ಚಿಕ್ಕಂದಿನಿಂದಲೂ ಇಬ್ಬರೂ ಆಪ್ತ ಸ್ನೇಹಿತರು. ಈಗಲೂ ಆ ಸ್ನೇಹ ಮುಂದುವರಿದಿದೆ.
 

ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರೆ ಇತ್ತ ರಕ್ಷಿತಾ ಪ್ರೇಮ್ ಟೆಂಪಲ್ ರನ್ ನಡೆಸಿದ್ದಾರೆ. ರಕ್ಷಿತಾ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿದಂತೆ ದಕ್ಷಿಣ ಕನ್ನಡದ ಪ್ರಮುಖ ದೇವಾಲಯಗಳಿಗೆ ತಮ್ಮ ಸಂಗಡಿಗರ ಜೊತೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದಾರೆ.

ಈ ಕ್ಷಣಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಕ್ಷಿತಾ ಈ ರೀತಿ ದಕ್ಷಿಣ ಕನ್ನಡದ ಪ್ರಸಿದ್ಧ ದೇವಾಲಯಗಳಿಗೆ ಹೋಗುವುದು ಇದೇ ಮೊದಲೇನಲ್ಲ. ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಸ್ನೇಹಿತರ ಜೊತೆ ದೇವಾಲಯ ದರ್ಶನಕ್ಕೆ ತೆರಳುತ್ತಾರೆ.

ಆದರೆ ಇದೀಗ ಸ್ನೇಹಿತ ದರ್ಶನ್ ಸಂಕಷ್ಟದಲ್ಲಿರುವಾಗ ರಕ್ಷಿತಾ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ದರ್ಶನ್ ಪ್ರಕರಣವಾದ ಬಳಿಕ ರಕ್ಷಿತಾ ಈ ಬಗ್ಗೆ ಒಂದೇ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿಲ್ಲ. ಆದರೆ ಈಗ ನಡೆಸಿರುವ ಟೆಂಪಲ್ ರನ್ ನಲ್ಲಿ ಗೆಳೆಯನಿಗಾಗಿಯೂ ಒಂದು ಪ್ರಾರ್ಥನೆ ಇದ್ದಿರಬಹುದು ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಲವ್‌ ಜಿಹಾದ್‌ಗೆ ಉತ್ತೇಜನ, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೀರ್ ಖಾನ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ

ಹಂಸಲೇಖಾರಿಗೆ ಪದ್ಮ ಪ್ರಶಸ್ತಿ ಇಲ್ಲವೇ ಜ್ಞಾನ ಪೀಠ ಕೊಡಬೇಕು ಎಂದು ನೆನಪಿರಲಿ ಪ್ರೇಮ್ ಅಭಿಯಾನ: ನೆಟ್ಟಿಗರು ಏನಂದ್ರು ಗೊತ್ತಾ

3 ಈಡಿಯಟ್ಸ್ ಸಿನಿಮಾ ಸೋನಮ್ ವಾಂಗ್ಚುಕ್ ಕತೆಯಲ್ಲ, ಆಗ ಅವರು ಯಾರೆಂದೇ ಗೊತ್ತಿರಲಿಲ್ಲ: ಅಮೀರ್ ಖಾನ್

ಮೊದಲ ಆಷಾಢ ಶುಕ್ರವಾರ: ಗಂಡ ದರ್ಶನ್ ಮಾಡುತ್ತಿದ್ದ ಕೆಲಸವನ್ನು ತಾನೇ ಮಾಡಿದ ವಿಜಯಲಕ್ಷ್ಮಿ

ಕ್ಯಾನ್ಸರ್‌ ಅನ್ನು ಸಾಮಾನ್ಯ ಜ್ವರದಂತೆ ಎದುರಿಸಿದೆ: ಕ್ಯಾನ್ಸರ್ ಗೆದ್ದು ಬಂದ ಬಗ್ಗೆ ಸಂಜಯ್ ದತ್ ಮಾತು

ಮುಂದಿನ ಸುದ್ದಿ
Show comments