Webdunia - Bharat's app for daily news and videos

Install App

ರಕ್ಷಿತ್ ಶೆಟ್ಟಿ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಒಪ್ಪಿಕೊಳ್ಳಲು ಇವರೇ ಕಾರಣ!

Webdunia
ಭಾನುವಾರ, 13 ಆಗಸ್ಟ್ 2023 (09:40 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಸೆಪ್ಟೆಂಬರ್ 1 ರಂದು ರಿಲೀಸ್ ಆಗುತ್ತಿದೆ. ಇದಕ್ಕೆ ಮೊದಲು ರಕ್ಷಿತ್ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರಾವಳಿ ನಡೆಸಿದ್ದಾರೆ.

ಈ ವೇಳೆ ರಕ್ಷಿತ್ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಬಗ್ಗೆ ಹಲವು ಮಾಹಿತಿ ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರು ಈ ಸಿನಿಮಾ ನೀವು ಒಪ್ಪಿಕೊಳ್ಳಲು ಕಾರಣವೇನೆಂದು ಕೇಳಿದ್ದಾರೆ.

ಇದಕ್ಕೆ ಉತ್ತರಿಸಿರುವ ರಕ್ಷಿತ್, ನಿರ್ದೇಶಕ ಹೇಮಂತ್ ರಾವ್ ಎಂದಿದ್ದಾರೆ. ಈ ಸಿನಿಮಾ ಹೇಮಂತ್ ರಾವ್ ಕವಿತೆ. ಅವರು ಲವ್ ಸ್ಟೋರಿ ಮಾಡಿರುವ ರೀತಿ ವಿಭಿನ್ನವಾಗಿದೆ. ಮನು ಆಗಿ ಈ ಸಿನಿಮಾದಲ್ಲಿ ನಿಮಗೆ ಇಷ್ಟವಾಗುವುದು ಖಂಡಿತಾ ಎಂದಿದ್ದಾರೆ. ಸಪ್ತಸಾಗರದಾಚೆ ಎಲ್ಲೊ ಎರಡು ಭಾಗಗಳಲ್ಲಿ ತಯಾರಾಗಿದ್ದು ಸೈಡ್ ಎ ಸೆಪ್ಟೆಂಬರ್ 1 ರಂದು ಸೈಡ್ ಬಿ ಅಕ್ಟೋಬರ್ ನಲ್ಲಿ ರಿಲೀಸ್ ಆಗುತ್ತಿದೆ. ಎರಡು ಪಾರ್ಟ್ ಇಷ್ಟು ಬೇಗ ರಿಲೀಸ್ ಆಗುತ್ತಿರುವುದಕ್ಕೆ ಕಾರಣವನ್ನೂ ರಕ್ಷಿತ್ ತಿಳಿಸಿದ್ದಾರೆ. ಎರಡೂ ಭಾಗಗಳನ್ನು ಒಟ್ಟಿಗೇ ನೋಡಿದರೆ ಮಾತ್ರ ಕತೆ ಸಂಪೂರ್ಣ ಎನಿಸುತ್ತದೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಮಾಯಣ ಟ್ರೇಲರ್‌ ಬಿಡುಗಡೆಗೆ ಚಿತ್ರತಂಡ ಫಿಕ್ಸ್ ಮಾಡಿದ ವಿಶೇಷ ಮುಹೂರ್ತದ ಸಂಪೂರ್ಣ ಮಾಹಿತಿ ಇಲ್ಲಿದೆ

ಅವರ ವಯಸ್ಸಿನಲ್ಲಿ ನನಗೆ ಎರಡು ರಾಷ್ಟ್ರೀಯ ಪ್ರಶಸ್ತಿಗಳು ಬಂದಿದ್ದವು: ಸೌರವ್ ದಾಸ್ ವಿರುದ್ಧ ಕಂಗನಾ ರಣಾವತ್ ಕಿಡಿ

ಆಗಸ್ಟ್ 8ರಂದು ಟಾಕ್ಸಿಕ್ ಸಿನಿಮಾದ ಟ್ರೇಲರ್ ಲಾಂಚ್ ಬೆಂಗಳೂರಿನಲ್ಲಿ

ಈಚೆಗೆ ಆಸ್ಪತ್ರೆಗೆ ದಾಖಲಾಗಿದ್ದ ನಟ ರಾಮ್ ಚರಣ್‌ ಆರೋಗ್ಯ ಬಗ್ಗೆ ಬಿಗ್‌ ಅಪ್ಡೇಟ್‌

ಕನ್ನಡ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಆಫರ್‌ಗೆ ನೋ ಎಂದ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್

ಮುಂದಿನ ಸುದ್ದಿ
Show comments