ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಶ್ಮಿಕಾ ಮಂದಣ್ಣ ಜತೆಗೆ ಎಂಗೇಜ್ ಮೆಂಟ್ ಮುರಿದು ಬಿದ್ದ ಮೇಲೆ ಸೋಷಿಯಲ್ ಮೀಡಿಯಾಗಳಿಂದ ದೂರವಿದ್ದರು. ಇದೀಗ ನಿನ್ನೆ ಅವರ ಬರ್ತ್ ಡೇ ದಿನ ಮತ್ತೆ ಟ್ವಿಟರ್ ಗೆ ಮರಳಿದ್ದಾರೆ.
									
										
								
																	
ರಕ್ಷಿತ್ ಈ ಮೊದಲೇ ಮತ್ತೆ ಸೋಷಿಯಲ್ ಮೀಡಿಯಾಗೆ ಬರುತ್ತಿರುವ ಸುದ್ದಿ ಅನೌನ್ಸ್ ಮಾಡಿದ್ದರು. ಅದರಂತೆ ನಿನ್ನೆ ಟ್ವಿಟರ್ ಖಾತೆಗೆ ಬಂದಿದ್ದು, ಮೊದಲ ಟ್ವೀಟ್ ನಲ್ಲೇ ಧೂಳೆಬ್ಬಿಸಿದ್ದಾರೆ.
									
			
			 
 			
 
 			
			                     
							
							
			        							
								
																	‘ಒಂದು ಬಿರುಗಾಳಿಯ ಮೊದಲು ಮೌನವಿರುತ್ತದೆ’ ಎಂದು ರಕ್ಷಿತ್ ಮೊದಲ ಟ್ವೀಟ್ ಮಾಡಿದ್ದಾರೆ.  ದಿನದಂತ್ಯಕ್ಕೆ ತಮ್ಮ ಹೊಸ ಸಿನಿಮಾ ಶ್ರೀಮನ್ನಾರಾಯಣದ ಟೀಸರ್ ಕೂಡಾ ಲಾಂಚ್ ಮಾಡಿದ್ದಾರೆ.  ಮತ್ತೆ ಟ್ವಿಟರ್ ಗೆ ಬಂದ ರಕ್ಷಿತ್ ಗೆ ಅಭಿಮಾನಿಗಳು ಖುಷಿಯಿಂದಲೇ ಸ್ವಾಗತಿಸಿದ್ದಾರೆ. ಆ ಮೂಲಕ ಮೊದಲ ದಿನವೇ ಟ್ವಿಟರ್ ನಲ್ಲಿ ಸದ್ದು ಮಾಡಿದ್ದಾರೆ ರಕ್ಷಿತ್.