Select Your Language

Notifications

webdunia
webdunia
webdunia
webdunia

ರಶ್ಮಿಕಾ ಬಗ್ಗೆ ತಪ್ಪು ಮಾಹಿತಿ ಪ್ರಕಟಿಸಿದ ಪತ್ರಿಕೆ ವಿರುದ್ಧ ರಕ್ಷಿತ್ ಶೆಟ್ಟಿ ಗರಂ

ರಶ್ಮಿಕಾ ಬಗ್ಗೆ ತಪ್ಪು ಮಾಹಿತಿ ಪ್ರಕಟಿಸಿದ ಪತ್ರಿಕೆ ವಿರುದ್ಧ ರಕ್ಷಿತ್ ಶೆಟ್ಟಿ ಗರಂ
ಬೆಂಗಳೂರು , ಗುರುವಾರ, 26 ಅಕ್ಟೋಬರ್ 2017 (10:43 IST)
ಬೆಂಗಳೂರು: ಭಾವೀ ಪತ್ನಿ ರಶ್ಮಿಕಾ ಮಂದಣ್ಣ ಬಗ್ಗೆ ತಪ್ಪು ಮಾಹಿತಿ ನೀಡಿದ ಪತ್ರಿಕೆಯೊಂದರ ಬಗ್ಗೆ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಗರಂ ಆಗಿದ್ದಾರೆ.

 
ರಶ್ಮಿಕಾ-ರಕ್ಷಿತ್ ಈಗಾಗಲೇ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ ಮದುವೆ ಯಾವಾಗ ಎಂದು ಇನ್ನೂ ನಿರ್ಧರಿಸಿಲ್ಲ. ಆದರೆ ಪತ್ರಿಕೆಯೊಂದರಲ್ಲಿ ಮದುವೆಯ ನಂತರ ರಶ್ಮಿಕಾ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ಸಾಧ್ಯತೆ ಇದೆ ಎಂದು  ಬರೆಯಲಾಗಿತ್ತು.

ಇದರಿಂದ ಗರಂ ಆಗಿರುವ ರಕ್ಷಿತ್ ಶೆಟ್ಟಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರತಿಕ್ರಿಯಿಸಿದ್ದು, ರಶ್ಮಿಕಾ ಮದುವೆಯ ನಂತರವೂ ಅಭಿನಯಿಸುತ್ತಾರೆ. ಆಕೆಯ ಮೊದಲ ಆಯ್ಕೆ ಕನ್ನಡವೇ ಆಗಿರುತ್ತದೆ. ದಯವಿಟ್ಟು ಇಂತಹ ಸುಳ್ಳು ಮಾಹಿತಿ ಪ್ರಕಟಿಸಬೇಡಿ ಎಂದು ಖಾರವಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಗಜನಿ’ ಹೀರೋಯಿನ್ ಆಸಿನ್ ಬಾಳಲ್ಲಿ ಹೊಸ ಸುದ್ದಿ