Webdunia - Bharat's app for daily news and videos

Install App

ಟೀಕೆ ಮಾಡಿದವರಿಗೆ ಸವಾಲು ಹಾಕಿ ಗೆದ್ದ ರಕ್ಷಿತ್ ಶೆಟ್ಟಿ

Webdunia
ಸೋಮವಾರ, 12 ಜುಲೈ 2021 (09:00 IST)
ಬೆಂಗಳೂರು: ಕೆಲವು ದಿನಗಳ ಹಿಂದೆ ಖಾಸಗಿ ವಾಹಿನಿಯೊಂದರಲ್ಲಿ ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಸುದ್ದಿ ಪ್ರಸಾರ ಮಾಡಿದ್ದಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿಡಿದೆದ್ದಿದ್ದರು.


ತಮ್ಮನ್ನು ಟೀಕೆ ಮಾಡಿದವರಿಗೆ ಜುಲೈ 11 ರಂದು ತಕ್ಕ ಉತ್ತರ ಕೊಡುವುದಾಗಿ ರಕ್ಷಿತ್ ಹೇಳಿಕೊಂಡಿದ್ದರು. ಅದರಂತೇ ನಡೆದುಕೊಂಡಿದ್ದಾರೆ. ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸುವ ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ರಕ್ಷಿತ್ ‘ರಿಚರ್ಡ್ ಆಂಟನಿ’ ಎಂಬ ಸಿನಿಮಾಗೆ ನಾಯಕ ಮತ್ತು ನಿರ್ದೇಶಕರಾಗಿದ್ದಾರೆ. ಈ ಸಿನಿಮಾ ಬಗ್ಗೆ ನಿನ್ನೆ ಘೋಷಣೆಯಾಗಿದೆ.

ಇದರ ಟೈಟಲ್ ನೋಡಿದ ಅಭಿಮಾನಿಗಳಿಗೆ ಇದು ‘ಉಳಿದವರು ಕಂಡಂತೆ’ ಸಿನಿಮಾದ ಮುಂದುವರಿದ ಭಾಗ ಎಂಬುದು ಪಕ್ಕಾ ಆಗಿದೆ. ರಕ್ಷಿತ್ ಎಲ್ಲಿ ಆರಂಭ ಮಾಡಿದ್ದೆನೋ ಮತ್ತೆ ಅಲ್ಲಿಂದಲೇ ಶುರು ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಟೈಟಲ್ ನಲ್ಲಿ ಕಡಲ ತಡಿಯಲ್ಲಿ ರಕ್ತ ಸಿಕ್ತ ಹೆಜ್ಜೆ ಗುರುತಿನ ಚಿತ್ರಗಳಿದ್ದು, ಜೊತೆಗೆ ಉಳಿದವರು ಕಂಡಂತೆ ಮೊದಲು ಮತ್ತು ನಂತರ ಎಂದು ಬರೆಯಲಾಗಿದೆ.  ಅಂತೂ ಸಲಾರ್, ಕೆಜಿಎಫ್ 2 ಮುಂತಾದ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್ ಮತ್ತೊಂದು ಅದ್ಧೂರಿ ಸಿನಿಮಾಗೆ ಕೈ ಹಾಕಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments