Select Your Language

Notifications

webdunia
webdunia
webdunia
webdunia

ಬಾಹುಬಲಿ-2 ಚಿತ್ರ ಬಿಡುಗಡೆಗೆ ಅವಕಾಶ ಕೊಡುವಂತೆ ಕನ್ನಡಿಗರಿಗೆ ಕನ್ನಡದಲ್ಲೇ ರಾಜಮೌಳಿ ಮನವಿ

ಬಾಹುಬಲಿ-2 ಚಿತ್ರ ಬಿಡುಗಡೆಗೆ ಅವಕಾಶ ಕೊಡುವಂತೆ ಕನ್ನಡಿಗರಿಗೆ ಕನ್ನಡದಲ್ಲೇ ರಾಜಮೌಳಿ ಮನವಿ
ಹೈದ್ರಾಬಾದ್ , ಗುರುವಾರ, 20 ಏಪ್ರಿಲ್ 2017 (13:51 IST)
ಕಾವೇರಿ ನದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸತ್ಯರಾಜ್ ನಟಿಸಿರುವ ಬಾಹುಬಲಿ-2 ಚಿತ್ರವನ್ನ ಕರ್ನಾಟಕದಲ್ಲಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಕನ್ನಡಿಗರು ಹೇಳಿರುವ ಹಿನ್ನೆಲೆಯಲ್ಲಿ ಚಿತ್ರ ನಿರ್ದೇಶಕ ರಾಜಮೌಳಿ ಕನ್ನಡಿಗರಲ್ಲಿ ಮನವಿ ಮಾಡಿಕೊಂಡಿದ್ದು, ಸತ್ಯರಾಜ್ ಅವರದ್ದು ಅವರ ವ್ಯಕ್ತಿಗತ ಅಭಿಪ್ರಾಯ. ಅದಕ್ಕೂ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

`ಸತ್ಯರಾಜ್ ಅವರ ವಿವಾದದ ಬಗ್ಗೆ ನಾನು ಮತ್ತು ನಿರ್ಮಾಪಕರು ನಿಮಗೊಂದು ಕ್ಲಾರಿಫಿಕೇಶನ್ ಕೊಡಲು ಇಚ್ಛಿಸುತ್ತೇವೆ. ಕೆಲ ವರ್ಷಗಳ ಹಿಂದೆ ಸತ್ಯರಾಜ್ ಮಾಡಿರುವ ಕಮೆಂಟ್ ಮತ್ತು ನಮಗೂ ಯಾವುದೇ ಸಂಬಂಧವಿಲ್ಲ. ಅದು ಕೇವಲ ಸತ್ಯಜಿತ್ ಅವರ ವ್ಯಕ್ತಿಗತ ಅಭಿಪ್ರಾಯ. 1 ತಿಂಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ನೊಡುವವರೆಗೂ ನಮಗೆ ಈ ವಿಷಯ ತಿಳಿದಿರಲಿಲ್ಲ. ಅವರು ಈ ಕಾಮೆಂಟ್ ಮಾಡಿ 9 ವರ್ಷ ಕಳೆದಿದೆ. ಆಮೇಲೆ ಅವರು ನಟಿಸಿ, ನಿರ್ಮಿಸಿರುವ ಎಷ್ಟೋ ಚಿತ್ರಗಳು ಕರ್ನಾಟಕದಲ್ಲಿ ರಿಲೀಸ್ ಆಗಿವೆ. ಬಾಹುಬಲಿ-1 ಸಹ ರಿಲೀಸ್ ಆಗಿದೆ. ಅದಕ್ಕೆಲ್ಲ ನೀವು ಹೇಗೆ ಆದರಿಸಿದ್ದೀರೋ ಅದೇ ರೀತಿ ಬಾಹುಬಲಿ ಪಾರ್ಟ್-2 ಸಹ ಆದರಿಸಬೇಕೆಂದು ಮನವಿ ಮಾಡುತ್ತಿದ್ದೇವೆ. ಸತ್ಯರಾಜ್ ಅವರು ಈ ಚಿತ್ರದ ನಿರ್ಮಾಪಕರೂ ಅಲ್ಲ, ನಿರ್ದೇಶಕರೂ ಅಲ್ಲ. ಚಿತ್ರದಲ್ಲಿ ಅನೇಕ ಕಲಾವಿದರಲ್ಲಿ ಅವರೂ ಒಬ್ಬರು. ಈ ಸಿನಿಮಾ ನಿಲ್ಲಿಸಿದರೆ ಸತ್ಯರಾಜ್`ಗೆ ಯಾವುದೇ ನಷ್ಟವಿಲ್ಲ. ಅವರ ಮೇಲಿನ ಸಿಟ್ಟನ್ನ ಚಿತ್ರದ ಮೇಲೆ ತೋರಿಸುವುದು ಸರಿಯಲ್ಲ. ಸತ್ಯರಾಜ್ ಅವರಿಗೆ ಫೋನ್ ಕರೆ ಮಾಡಿ ಪರಿಸ್ಥಿತಿ ತಿಳಿಸಿದ್ದೇವೆ. ಅದರ ಮೇಲೆ ಏನೂ ಮಾಡುವುದಕ್ಕೂ ನಮಗೆ ಶಕ್ತಿ ಇಲ್ಲ. ನಮಗೆ ಸಂಬಂಧವಿಲ್ಲದ ಈ ವಿಷಯದಲ್ಲಿ ನಮ್ಮನ್ನ ಸೇರಸಿಬಾರದೆಂದು ಮನವಿ ಮಾಡುತ್ತೇನೆ. ನಿಮ್ಮೆಲ್ಲರ ಪ್ರೀತಿ ಹೀಗೆ ಇರಬೇಕೆಂಬುದು ನಮ್ಮ ಆಸೆ’ ಎಂದು ರಾಜಮೌಳಿ ಹೇಳಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೇಳ್ರಪ್ಪೋ.. ಕಿರಿಕ್ ಪಾರ್ಟಿ ಕಾರು ಸೇಲ್ ಗಿದೆಯಂತಪ್ಪೋ..!!