Publish Date: Mon, 22 Aug 2022 (18:46 IST)
Updated Date: Mon, 22 Aug 2022 (18:47 IST)
ಹೈದರಾಬಾದ್: ಬಹುನಿರೀಕ್ಷಿತ ಪುಷ್ಪ 2 ಸಿನಿಮಾಗೆ ಇಂದು ಮುಹೂರ್ತ ಕಾರ್ಯ ನೆರವೇರಿದೆ. ಆದರೆ ನಾಯಕ ಅಲ್ಲು ಅರ್ಜುನ್ ಮತ್ತು ನಾಯಕಿ ರಶ್ಮಿಕಾ ಮಂದಣ್ಣ ಗೈರಾಗಿದ್ದಾರೆ.
ಮುಂದಿನ ಎರಡು ತಿಂಗಳಿಗೆ ಯಾವುದೇ ಶುಭ ಮುಹೂರ್ತವಿಲ್ಲ ಎನ್ನುವ ಕಾರಣಕ್ಕೆ ತರಾತುರಿಯಲ್ಲಿ ಮುಹೂರ್ತ ಪೂಜೆ ಮಾಡಲಾಗಿದೆ.
ಆದರೆ ರಶ್ಮಿಕಾ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಅಲ್ಲು ಅರ್ಜುನ್ ನ್ಯೂಯಾರ್ಕ್ ಪ್ರವಾಸದಲ್ಲಿದ್ದಾರೆ. ಹೀಗಾಗಿ ಇಬ್ಬರ ಅನುಪಸ್ಥಿತಿಯಲ್ಲಿ ಮುಹೂರ್ತ ನೆರವೇರಿದೆ.