Puneeth Rajkumar: ಈ ದಿನವನ್ನು ಪುನೀತ್ ರಾಜ್ ಕುಮಾರ್ ಮಾತ್ರವಲ್ಲ, ಕನ್ನಡಿಗರು ಹೇಗೆ ಮರೆಯಲು ಸಾಧ್ಯ

Krishnaveni K
ಮಂಗಳವಾರ, 29 ಅಕ್ಟೋಬರ್ 2024 (09:03 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಮ್ಮೆಲ್ಲರ ಪ್ರೀತಿಯ ಅಪ್ಪು ನಮ್ಮನ್ನಗಲಿ ಇಂದಿಗೆ ಮೂರು ವರ್ಷವಾಗಿದೆ. ಈ ದಿನವನ್ನು ಅಪ್ಪು ಅಭಿಮಾನಿಗಳು ಮಾತ್ರವಲ್ಲ, ಕನ್ನಡಿಗರು ಯಾರೂ ಮರೆಯಲು ಸಾಧ್ಯವೇ ಇಲ್ಲ.

ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಆಘಾತಕಾರೀ ಸಾವುಗಳು ಎರಡು. ಅದರಲ್ಲಿ ಒಂದು ದಿವಂಗತ ಶಂಕರ್ ನಾಗ್ ಅವರದ್ದಾದರೆ ಇನ್ನೊಂದು ಪುನೀತ್ ರಾಜ್ ಕುಮಾರ್ ಅವರದ್ದು. ಖ್ಯಾತಿಯ ಉತ್ತುಂಗದಲ್ಲಿದ್ದಾಗ, ವಯಸ್ಸಲ್ಲದ ವಯಸ್ಸಿನಲ್ಲಿ ಆಘಾತಕಾರೀ ಸಾವನ್ನಪ್ಪಿದ್ದ ಇಬ್ಬರು ಸ್ಟಾರ್ ಗಳಿವರು.

ಅಕ್ಟೋಬರ್ 29, 2021 ರಂದು ಪುನೀತ್ ರಾಜ್ ಕುಮಾರ್ ಹೃದಯಸ್ತಂಬನಕ್ಕೊಳಗಾಗಿ ದಿಡೀರ್ ಆಗಿ ಸಾವನ್ನಪ್ಪಿದ್ದರು. ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಡಲಿಲ್ಲಿ ಮಲಗಿಯೇ ಪುನೀತ್ ಪ್ರಾಣ ಬಿಟ್ಟಿದ್ದರು. ಚಿತ್ರರಂಗದಲ್ಲಿ ಶತ್ರುಗಳೇ ಇಲ್ಲದ, ಎಲ್ಲರಲ್ಲೂ ಸ್ನೇಹವನ್ನೇ ಕಾಣುತ್ತಿದ್ದ ಅಪ್ಪು ಅಗಲುವಿಕೆಯನ್ನು ಅರಗಿಸಿಕೊಳ್ಳಲು ಇಂದಿಗೂ ಕನ್ನಡಿಗರಿಗೆ ಸಾಧ್ಯವಾಗಿಲ್ಲ.

ಅವರು ನಿಧನರಾಗಿ ಇಂದಿಗೆ ಮೂರು ವರ್ಷವಾಗಿದ್ದು, ಅವರ ಸಮಾಧಿ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಬೆಳಗ್ಗೆಯಿಂದ ಜನ ಸೇರಿದ್ದಾರೆ. ಅಪ್ಪು ಸಮಾಧಿಗೆ ಇಂದು ಡಾ. ರಾಜ್ ಕುಟುಂಬವೂ ಬಂದು ಪೂಜೆ ಸಲ್ಲಿಸಲಿದೆ. ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಅವರ ಪುಣ್ಯತಿಥಿಯನ್ನು ಆಚರಿಸುತ್ತಿದ್ದಾರೆ. ಅವರ ನಿಧನದ ಬಳಿಕ ಕನ್ನಡ ಚಿತ್ರರಂಗಕ್ಕೆ ಆವರಿಸಿದ ಶೂನ್ಯವನ್ನು ಇಂದಿಗೂ ತುಂಬಲು ಸಾಧ್ಯವಾಗಿಲ್ಲ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತೆರೆಗೆ ಅಪ್ಪಲಿಸಿದ ಜನ ನಾಯಗನ್: ಮುಖ್ಯಮಂತ್ರಿಯನ್ನು ಬೆಳ್ಳಿತೆರೆಯಲ್ಲಿ ಕಂಡು ಅಭಿಮಾನಿಗಳು ಫುಟ್‌ಖುಷ್‌

ವಿದ್ಯಾರ್ಥಿಗಳ ಹೋರಾಟ ಅವರದ್ದೇ ಆಗಿರಲಿ, ರಾಜಕೀಯ ಬೇಡ: ದೆಹಲಿ ಪ್ರತಿಭಟನೆ ಬಗ್ಗೆ ಸಲ್ಮಾನ್ ಖಾನ್ ಬೇಸರ

ದೇಶದಾದ್ಯಂತ ಏಕಕಾಲದಲ್ಲಿ ಬಿಗ್‌ಬಾಸ್‌ ಹವಾ ಶುರು: ಜಿಯೋಸ್ಟಾರ್ ಸಂಸ್ಥೆಯಿಂದ ಮಹತ್ವದ ಅಪ್‌ಡೇಟ್‌

ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ ಅಮಿತಾಬ್‌ ಪೋಸ್ಟ್; ಖುದ್ದಾಗಿ ಸ್ಪಷ್ಟನೆ ನೀಡಿದ ಬಿಗ್‌ಬಿ

ದರ್ಶನ್‌ರನ್ನು ಭೇಟಿಯಾದ ವಿಜಯಲಕ್ಷ್ಮಿ, ರಕ್ಷಿತಾ ಪ್ರೇಮ್‌, ಮಾಧ್ಯಮಕ್ಕೆ ಹೇಳಿದ್ದಿಷ್ಟು

ಮುಂದಿನ ಸುದ್ದಿ
Show comments