Select Your Language

Notifications

webdunia
webdunia
webdunia
webdunia

ತಮಿಳು ರೈತರಿಗಾಗಿ ನಟ ಪ್ರಕಾಶ್ ರೈ ಮಾಡಿದ್ದೇನು?!

ತಮಿಳು ರೈತರಿಗಾಗಿ ನಟ ಪ್ರಕಾಶ್ ರೈ ಮಾಡಿದ್ದೇನು?!
NewDelhi , ಶನಿವಾರ, 25 ಮಾರ್ಚ್ 2017 (09:22 IST)
ನವದೆಹಲಿ: ಕನ್ನಡಿಗ, ತಮಿಳು ಚಿತ್ರರಂಗದಲ್ಲಿ ಖ್ಯಾತರಾಗಿರುವ ಪ್ರಕಾಶ್ ರೈ ತಮಿಳುನಾಡಿನ ರೈತರಿಗಾಗಿ ದೆಹಲಿಯಲ್ಲಿ ಅರೆಬೆತ್ತಲಾಗಿದ್ದಾರೆ. ದೆಹಲಿಯ ಜಂತರ್ ಮಂತರ್ ನಲ್ಲಿ ರೈತರಿಗೆ ನೆರವಾಗುವಂತೆ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

 

ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡಿನ ರೈತರ ಜತೆಗೂಡಿದ ಪ್ರಕಾಶ್ ರೈ ‘ದೇಶಕ್ಕೆ ಅನ್ನ ನೀಡುವ ರೈತರು ಕಷ್ಟದಲ್ಲೇ ದಿನ ಕಳೆಯುತ್ತಿದ್ದಾರೆ. ಅವರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಅವರ ನೋವನ್ನು ಯಾರೂ ಕೇಳುತ್ತಿಲ್ಲ. ಹೀಗಾದರೆ, ಅವರು ಬದುಕುವುದು ಹೇಗೆ?’ ಎಂದು ಪ್ರಶ್ನಿಸಿದ್ದಾರೆ.

 
ಪ್ರಕಾಶ್ ರೈ ಜತೆಗೆ ತಮಿಳು ನಟ ವಿಶಾಲ್, ನಿರ್ದೇಶಕ ಪಾಂಡಿಯರಾಜ್ ಸೇರಿದ್ದಾರೆ. ರೈತರಿಗೆ ಕೇಂದ್ರ ಸರ್ಕಾರ ಈಗಾಗಲೇ 1500 ಕೋಟಿ ರೂ. ಬರ ಪರಿಹಾರ ನೀಡಿದ್ದರೂ, ಅದು ಸಾಲದು ಎಂದು ಪ್ರತಿಭಟನೆ ನಡೆಸಲಾಗುತ್ತಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ನಟಿಯನ್ನ ಮಂಚಕ್ಕೆ ಕರೆದ ನಿರ್ಮಾಪಕನ ವಿರುದ್ಧ ಕೇಸ್