Publish Date: Fri, 08 Feb 2019 (09:04 IST)
Updated Date: Fri, 08 Feb 2019 (09:06 IST)
ಹೈದರಾಬಾದ್: ಆಗಾಗ ತಮ್ಮ ಮದುವೆ ಬಗ್ಗೆ ಪುಕಾರು ಹಬ್ಬಿಸುವ ಮಾವ ಕೃಷ್ಣರಾಜು ವಿರುದ್ಧ ಇದೀಗ ಬಾಹುಬಲಿ ಪ್ರಭಾಸ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಬಾಹುಬಲಿ ಸಿನಿಮಾ ಮುಗಿದ ಬಳಿಕ ಪ್ರಭಾಸ್ ಮದುವೆಯಾಗುತ್ತಾರೆ ಎಂದು ಕೃಷ್ಣರಾಜು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದರು. ಇದೀಗ ಸಾಹೋ ಬಳಿಕ ಪ್ರಭಾಸ್ ಮದುವೆಯಾಗುತ್ತಾರೆ ಎಂದು ಕೃಷ್ಣರಾಜು ಹೇಳಿಕೆ ನೀಡಿದ್ದರು.
ಇದು ಪ್ರಭಾಸ್ ಸಿಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ. ಹೀಗಾಗಿ ಪದೇ ಪದೇ ತಮ್ಮ ಮದುವೆ ಬಗ್ಗೆ ಪತ್ರಿಕೆಗಳಿಗೆ ಹೇಳಿಕೆ ಕೊಡಬೇಡಿ. ನಾನು ನನ್ನ ವೃತ್ತಿ ಜೀವನದ ಬಗ್ಗೆ ಗಮನಕೇಂದ್ರೀಕರಿಸಬೇಕಿದೆ ಎಂದು ಪ್ರಭಾಸ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ