Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿಗೆ ಪೊಲೀಸ್ ಬಿಗಿ ಭದ್ರತೆ : ಕಾರಣ ಏನ್ ಗೊತ್ತಾ?

ಬಾಲಿವುಡ್ ನಟಿಗೆ ಪೊಲೀಸ್ ಬಿಗಿ ಭದ್ರತೆ : ಕಾರಣ ಏನ್ ಗೊತ್ತಾ?
ಮುಂಬೈ , ಸೋಮವಾರ, 7 ಸೆಪ್ಟಂಬರ್ 2020 (10:47 IST)
ನಟ ಸುಶಾಂತ್ ಸಿಂಗ ರಜಪೂತ್ ಸಾವಿಗೆ ನ್ಯಾಯಕ್ಕಾಗಿ ಆಗ್ರಹ ಮಾಡುತ್ತಿರುವ ಬಾಲಿವುಡ್ ನಟಿ ಪೊಲೀಸ್ ಭದ್ರತೆಯನ್ನು ಸರಕಾರ ಕಲ್ಪಿಸಿದೆ.

ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ತಂದೆ ಮತ್ತು ಸಹೋದರಿಯ ಕೋರಿಕೆಯ ಮೇರೆಗೆ ಹಿಮಾಚಲ ಪ್ರದೇಶ ಸರ್ಕಾರ ಪೊಲೀಸ್ ರಕ್ಷಣೆ ನೀಡಲಿದೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್  ಅವರು ಮಾತನಾಡಿದ್ದು, ಮುಂಬೈ ಭೇಟಿಗಾಗಿ ಬಾಲಿವುಡ್ ನಟಿ ಕಂಗನಾಗೆ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

"ಕಂಗನಾ ರಣಾವತ್ ಅವರ ತಂದೆ ಪೊಲೀಸ್ ರಕ್ಷಣೆ ಕೋರಿ ಲಿಖಿತವಾಗಿ ಮನವಿ ನೀಡಿದ್ದಾರೆ. ನಾನು  ಅವರ ಸಹೋದರಿಯೊಂದಿಗೆ ಮಾತನಾಡಿದ್ದೇನೆ. ಈ ನಿಟ್ಟಿನಲ್ಲಿ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ ಮತ್ತು ಅವರಿಗೆ ಭದ್ರತೆ ನೀಡಲಾಗುವುದು. ಸುರಕ್ಷತೆ ಒದಗಿಸಲು ಏನು ಮಾಡಬಹುದು ಎಂದು ನಾವು ಚರ್ಚಿಸುತ್ತಿದ್ದೇವೆ. ಸೆಪ್ಟೆಂಬರ್ 9 ರಂದು ಮುಂಬೈಗೆ ತೆರಳುತ್ತಿರುವಾಗ ರಾಜ್ಯದ ಹೊರಗೆ ನಟಿಗೆ ಭದ್ರತೆ ಕೊಡಲಾಗುತ್ತದೆ ಎಂದು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನನಗೆ ಆಗದವರು ಡ್ರಗ್ಸ್ ಪ್ರಕರಣದಲ್ಲಿ ಫಿಕ್ಸ್ ಮಾಡಿದ್ದಾರೆ: ರಾಗಿಣಿ ದ್ವಿವೇದಿ