Select Your Language

Notifications

webdunia
webdunia
webdunia
webdunia

ನಟ ದರ್ಶನ್ ಜೈಲು ರಾಜಾತಿಥ್ಯಕ್ಕೆ ಬ್ರೇಕ್ ಹಾಕಲು ತಕ್ಕ ಪ್ಲ್ಯಾನ್ ರೆಡಿ

Darshan

Krishnaveni K

ಬೆಂಗಳೂರು , ಸೋಮವಾರ, 26 ಆಗಸ್ಟ್ 2024 (12:14 IST)
ಬೆಂಗಳೂರು: ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿರುವ ಬಗ್ಗೆ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇದಕ್ಕೆ ಬ್ರೇಕ್ ಹಾಕಲು ಈಗ ತಕ್ಕ ಪ್ಲ್ಯಾನ್ ಮಾಡಲಾಗಿದೆ.

ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಐಪಿ ಟ್ರೀಟ್ ಮೆಂಟ್ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೈಲಿನಲ್ಲೇ ಅವರಿಗೆ ಗುಂಡು, ತುಂಡು ಎಲ್ಲವೂ ಸರಬರಾಜು ಆಗುತ್ತಿದೆ. ಬೇಕಾದಾಗ ಸಿಗರೇಟು ಸಿಗುತ್ತಿದೆ. ಅಂತೂ ಜೈಲಲ್ಲಿ ರೆಸಾರ್ಟ್ ರೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂಬ ಆರೋಪ ಬಂದಿದೆ.

ಅದಕ್ಕೆ ಪುಷ್ಠಿ ನೀಡುವಂತೆ ನಿನ್ನೆ ಫೋಟೋವೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಗೃಹಸಚಿವ ಜಿ ಪರಮೇಶ್ವರ್ ಕೆಲವು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ತನಿಖೆಗೆ ಆದೇಶಿಸಿದ್ದಾರೆ. ಈ ನಡುವೆ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗದಂತೆ ಮಾಡಲು ಈಗ ತಕ್ಕ ಪ್ಲ್ಯಾನ್ ಮಾಡಲಾಗುತ್ತಿದೆ ಎನ್ನಲಾಗಿದೆ.

ದರ್ಶನ್ ಗೆ ರಾಜಾತಿಥ್ಯ ನೀಡಲು ಸಹಾಯ ಮಾಡುತ್ತಿದ್ದುದು ರೌಡಿ  ವಿಲ್ಸನ್ ಗಾರ್ಡನ್ ನಾಗ. ಒಂದೋ ಆತನಿಗೆ ಇಲ್ಲಿ ಸಾಕಷ್ಟು ಸಹಾಯ ದೊರೆಯುತ್ತಿದ್ದು ಆ ಕಾರಣಕ್ಕೆ ಆತನನ್ನೇ ಬೇರೆ ಜೈಲಿಗೆ ಶಿಫ್ಟ್ ಮಾಡಲು ಚಿಂತನೆ ನಡೆದಿದೆ. ಇಲ್ಲದೇ ಹೋದಲ್ಲಿ ದರ್ಶನ್ ರನ್ನೇ ಬೇರೆ ಜೈಲಿಗೆ ಶಿಫ್ಟ್ ಮಾಡಬಹುದಾಗಿದೆ. ಇಂದು ಸಂಜೆಯೊಳಗೆ ಈ ಬಗ್ಗೆ ತೀರ್ಮಾನವಾಗುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಗೆ ಜೈಲಿನಲ್ಲೇ ಮಿಲಿಟ್ರಿ ಹೋಟೆಲ್ ಬಿರಿಯಾನಿ, ಕಿಕ್ ಏರಿಸಲು ಎಣ್ಣೆ, ಇಷ್ಟೆಲ್ಲಾ ಇದ್ದ ಮೇಲೆ ಮನೆ ಊಟ ಯಾಕೆ ಬೇಕು