Select Your Language

Notifications

webdunia
webdunia
webdunia
webdunia

ದರ್ಶನ್ ಗೆ ಮನೆ ಊಟ ನೀಡುವ ವಿಚಾರ ಏನಾಯ್ತು ಇಲ್ಲಿದೆ ಅಪ್ ಡೇಟ್

Darshan Thoogudeepa

Krishnaveni K

ಬೆಂಗಳೂರು , ಮಂಗಳವಾರ, 20 ಆಗಸ್ಟ್ 2024 (12:12 IST)
ಬೆಂಗಳೂರು:  ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮನೆ ಊಟಕ್ಕಾಗಿ ಸಲ್ಲಿಸಿದ್ದ ಅರ್ಜಿಯ ಕತೆ ಏನಾಯ್ತು ಎಂಬುದಕ್ಕೆ ಇಂದು ಉತ್ತರ ಸಿಗಲಿದೆ.

ದರ್ಶನ್ ಪರ ವಕೀಲರು ಅನಾರೋಗ್ಯದ ನೆಪವೊಡ್ಡಿ ಮನೆ ಊಟಕ್ಕೆ ಮತ್ತು ಹಾಸಿಗೆ, ಪುಸ್ತಕ ತರಿಸಿಕೊಳ್ಳಲು ಅವಕಾಶ ನೀಡುವಂತೆ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ನ ಏಕಸದಸ್ಯ ಪೀಠ ನಡೆಸಲಿದೆ. ದರ್ಶನ್ ಗೆ ಮನೆ ಊಟ ನೀಡುವ ಬಗ್ಗೆ ಜೈಲು ಅಧಿಕಾರಿಗಳು ತಮ್ಮ ವರದಿ ಸಲ್ಲಿಸುವಂತೆ ಕೋರ್ಟ್ ಸೂಚನೆ ನೀಡಿತ್ತು. ಅದರಂತೆ ಜೈಲು ಅಧಿಕಾರಿಗಳು ತಮ್ಮ ವರದಿ ಸಲ್ಲಿಸಿದ್ದಾರೆ.

ಇದೀಗ ಕೋರ್ಟ್ ವರದಿ ಪರಿಶೀಲಿಸಿ ಇಂದು ದರ್ಶನ್ ಗೆ ಮನೆ ಊಟ ಮತ್ತು ಇತರೆ ಸವಲತ್ತು ನೀಡುವ ಬಗ್ಗೆ ತೀರ್ಪು ಪ್ರಕಟಿಸಲಿದೆ. ಕಳೆದ ಬಾರಿ ಕೋರ್ಟ್ ವಿಚಾರಣೆ ವೇಳೆ ದರ್ಶನ್ ಗೆ ಮನೆ ಊಟ ನಿರಾಕರಿಸಿತ್ತು. ಈ ಬಗ್ಗೆ ವಿಸ್ತೃತ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿತ್ತು.

ಇದೀಗ ಅಧಿಕಾರಿಗಳು ಮತ್ತೆ ದರ್ಶನ್ ಗೆ ಮನೆ ಊಟ ನೀಡುವ ಅಗತ್ಯವಿಲ್ಲ ಎಂದು ವರದಿ ನೀಡಿದ್ದಾರೆ ಎನ್ನಲಾಗಿದೆ. ಜೈಲಿನಲ್ಲಿ ನೀಡುತ್ತಿರುವ ಆಹಾರ ಗುಣಮಟ್ಟದ್ದಾಗಿದೆ. ಇತರೆ ಖೈದಿಗಳಿಗೆ ಯಾವುದೇ ಸಮಸ್ಯೆಯಿಲ್ಲದಿರುವಾಗ ದರ್ಶನ್ ಗೆ ಮಾತ್ರ ಯಾಕೆ ಸಮಸ್ಯೆಯಾಗುತ್ತಿದೆ ಎಂಬುದು ಅಧಿಕಾರಿಗಳ ವಾದವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ದೇಶದಲ್ಲಿ ವಾಹನಗಳ ಹಾರ್ನ್ ಇರಲ್ಲ, ಟ್ರಾಫಿಕ್ ಸಿಗ್ನಲೂ ಇಲ್ಲ: ಭಾರತೀಯರಿಗೆ ವೀಸಾ ಕೂಡಾ ಬೇಡ