Publish Date: Thu, 18 Nov 2021 (16:56 IST)
Updated Date: Thu, 18 Nov 2021 (16:57 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ನಾಯಕರಾಗಿರುವ ಮುಗಿಲ್ ಪೇಟೆ ಸಿನಿಮಾಗೆ ರಿಲೀಸ್ ಗೂ ಮುನ್ನವೇ ಪೈರಸಿ ಕಾಟ ಶುರುವಾಗಿದೆ.
ನಾಳೆ ಬಿಡುಗಡೆಯಾಗಲಿರುವ ಸಿನಿಮಾದ ಲಿಂಕ್ ಆನ್ ಲೈನ್ ಗಳಲ್ಲಿ ಶೇರ್ ಆಗುತ್ತಿರುವ ಬಗ್ಗೆ ಚಿತ್ರತಂಡಕ್ಕೆ ಮಾಹಿತಿ ಸಿಕ್ಕಿದೆ. ಹೀಗಾಗಿ ಸಿನಿಮಾ ಸೋರಿಕೆಯಾಗದಂತೆ ಚಿತ್ರತಂಡ ಪ್ರಯತ್ನ ನಡೆಸಿದೆ.
ಇದಕ್ಕೂ ಮೊದಲು ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾಗೂ ಪೈರಸಿ ಕಾಟ ಎದುರಾಗಿತ್ತು. ಬಳಿಕ ನಿರ್ಮಾಪಕ ಸೂರಪ್ಪ ಬಾಬು ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ದೂರು ಕೊಟ್ಟಿದ್ದರು. ಇದೀಗ ಮುಗಿಲ್ ಪೇಟೆ ಸರದಿ.