Publish Date: Mon, 02 Mar 2020 (20:35 IST)
Updated Date: Mon, 02 Mar 2020 (20:39 IST)
ಸ್ಯಾಂಡಲ್ ವುಡ್ ನಲ್ಲಿ ಸದ್ದಿಲ್ಲದೇ ಸುದ್ದಿ ಮಾಡಲು ಬಿಡುಗಡೆಗೊಂಡಿದ್ದ ಹೊಸ ಚಿತ್ರವೊಂದು ಬಿಡುಗಡೆಯಾದ ದಿನವೇ ಪೈರಸಿ ಕಾಟಕ್ಕೆ ನಲುಗಿದೆ.
ಹೊಸ ಚಲನಚಿತ್ರ ಮಾಯಾಬಜಾರ್ ಚಲನಚಿತ್ರವನ್ನು ಬಿಡುಗಡೆಗೊಂಡ ದಿನವೇ ಪೈರಸಿ ಮಾಡಲಾಗಿದೆ. ಹೀಗಂತ ಆರೋಪಿಸಿ ಚಿತ್ರತಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದೆ.
ನಟ ಪುನಿತ್ ರಾಜಕುಮಾರ್ ನಿರ್ಮಾಣದ ಮಾಯಾಬಜಾರ್ ಚಲನಚಿತ್ರವನ್ನು ಪೈರಸಿ ಮಾಡಿದ್ದರ ವಿರುದ್ಧ ಬೆಂಗಳೂರಿನ ಸದಾಶಿವ ಪೊಲೀಸ್ ಠಾಣೆಯಲ್ಲಿ ಕೇಸ್ ಫೈಲ್ ಆಗಿದೆ.
ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪೈರಸಿ ಕಾಟವು ಚಿತ್ರತಂಡವನ್ನು ಕಾಡುತ್ತಿದೆ.