Select Your Language

Notifications

webdunia
webdunia
webdunia
webdunia

ತಿರುಪತಿ ವೆಂಕಟೇಶ್ವರನ ಮೇಲೆ ನಂಬಿಕೆ ಘೋಷಿಸಿ ದೇವಸ್ಥಾನ ಪ್ರವೇಶಿಸಿದ ಪವನ್ ಕಲ್ಯಾಣ್ ಪುತ್ರಿ

Andhra Pradesh Deputy Chief Minister, Actor Pawan Kalyan

Sampriya

ಅಮರಾವತಿ , ಬುಧವಾರ, 2 ಅಕ್ಟೋಬರ್ 2024 (14:11 IST)
Photo Courtesy X
ಅಮರಾವತಿ: ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರ ಪುತ್ರಿ ಪಲಿನಾ ಅಂಜನಿ ಕೊನಿಡೇಲಾ ಅವರು ತಿರುಮಲ ದೇವಸ್ಥಾನ ಪ್ರವೇಶಿಸುವ ಮೊದಲು ತಿರುಪತಿ ವೆಂಕಟೇಶ್ವರನ ಮೇಲೆ ನಂಬಿಕೆಯಿದೆ ಘೋಷಿಸಿದ್ದಾರೆ.

ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವ ಹಿಂದುಯೇತರರು, ದೇವರಲ್ಲಿ ನಂಬಿಕೆಯಿದೆ ಎಂದು ಘೋಷಿಸುವುದು ಕಡ್ಡಾಯವಾಗಿದೆ. ಪಲಿನಾ ಅಂಜನಿ ಅವರು ಹಿಂದುಯೇತರರು ಎಂದು ಗುರುತಿಸಿಕೊಂಡಿದ್ದರಿಂದ ತನ್ನ ನಂಬಿಕೆ ಘೋಷಣೆ ಮಾಡಿದ್ದಾರೆ.

ಟಿಟಿಡಿ ಸಿಬ್ಬಂದಿ ನೀಡಿದ ದಾಖಲೆಗಳಿಗೆ ಸಹಿ ಹಾಕುವ ಮೂಲಕ ಪಲಿನಾ ಅವರು ವೆಂಕಟೇಶ್ವರನಲ್ಲಿ ಭಕ್ತಿ, ನಂಬಿಕೆಯಿರುವುದಾಗಿ ಘೋಷಿಸಿದ್ದಾರೆ. ಪಲಿನಾ ಅವರು ಅಪ್ರಾಪ್ತರಾಗಿರುವುದರಿಂದ ಅವರ ತಂದೆ ಪವನ್ ಕಲ್ಯಾಣ್ ದಾಖಲೆಗಳನ್ನು ಅನುಮೋದಿಸಿದ್ದಾರೆ ಎಂದು ಜನಸೇನಾ ಪಕ್ಷ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪಲಿನಾ ಅವರು ಪವನ್ ಕಲ್ಯಾಣ ಅವರ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಅವರ ಮಗಳು.

ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಬಳಸಲಾಗಿದೆ ಎಂಬ ಆರೋಪದ ಬೆನ್ನಲ್ಲೇ ದೇವಾಲಯದ ಶುದ್ದೀಕರಣಕ್ಕಾಗಿ ಪವನ್ ಕಲ್ಯಾಣ 11 ದಿನಗಳ ದೀಕ್ಷೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

BBK11: ಕಾಮಿಡಿ ಪೀಸ್ ಎಂದ ಲಾಯರ್ ಜಗದೀಶ್ ಗೆ ವಿಶಿಷ್ಟವಾಗಿ ಉತ್ತರ ಕೊಟ್ಟ ಧನರಾಜ್ ಆಚಾರ್ (Video)