Select Your Language

Notifications

webdunia
webdunia
webdunia
webdunia

ಪವನ್ ಕಲ್ಯಾಣ್ ಜೀವಕ್ಕೆ ಕುತ್ತು: ಗುಪ್ತಚರ ಇಲಾಖೆಯಿಂದ ಎಚ್ಚರಿಕೆ

Pawan Kalyan

Krishnaveni K

ಹೈದರಾಬಾದ್ , ಮಂಗಳವಾರ, 23 ಜುಲೈ 2024 (10:33 IST)
ಹೈದರಾಬಾದ್: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಗೆ ಜೀವ ಬೆದರಿಕೆಯಿದ್ದು, ಎಚ್ಚರಿಕೆಯಿರುವಂತೆ ಗುಪ್ತಚರ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದು ಪವನ್ ಕಲ್ಯಾಣ್ ಚಂದ್ರಬಾಬು ನಾಯ್ಡು ಜೊತೆಗಿನ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. ಅಲ್ಲದೆ, ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದಾದ ಬೆನ್ನಲ್ಲೇ ಪವನ್ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ.

ಉಪ ಮುಖ್ಯಮಂತ್ರಿಯಾದ ನಂತರವಂತೂ ಪವನ್ ಓಡಾಟ ಹೆಚ್ಚಾಗಿದೆ. ಆದರೆ ಈ ರೀತಿ ಸಾರ್ವಜನಿಕವಾಗಿ ಓಡಾಡುವಾಗ ಅವರ ಮೇಲೆ ದಾಳಿಯಾಗುವ ಅಪಾಯವಿದೆ, ಅವರ ಪ್ರಾಣಕ್ಕೆ ಅಪಾಯವಿದೆ ಎಂಬ ಶಾಕಿಂಗ್ ಸಂಗತಿಯನ್ನು ಗುಪ್ತಚರ ಇಲಾಖೆ ನೀಡಿದೆ. ಅವರ ಹತ್ಯೆಗೆ ಸಂಚು ನಡೆದಿದೆ ಎಂಬ ಗಂಭೀರ ವಿಚಾರ ಬೆಳಕಿಗೆ ಬಂದಿದೆ.

ಈ ಹಿನ್ನಲೆಯಲ್ಲಿ ಜನಸೇನಾ ಪಕ್ಷದ ನಾಯಕನಿಗೆ ಭದ್ರತೆ ಹೆಚ್ಚಿಸಲು ಗುಪ್ತಚರ ಇಲಾಖೆ ಪೊಲೀಸರಿಗೆ ಸೂಚನೆ ನೀಡಿದೆ. ಪವನ್ ಕಲ್ಯಾಣ್ ಏಳಿಗೆಯನ್ನು ಸಹಿಸದವರು ಈ ರೀತಿ ಮಾಡಿರಬಹುದು. ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಬೇಕು ಎಂದು ಜನಸೇನಾ ಪಕ್ಷ ಆಗ್ರಹಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಲ್ಲಿ ಸದ್ಯ ದರ್ಶನ್‌ಗಿಲ್ಲ ಮನೆಯೂಟ ಸವಿಯುವ ಭಾಗ್ಯ