ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ದೂರವಾಗಿಯೇ ಉಳಿದಿದ್ದಾರೆ. ಕೋರ್ಟ್ ವಿಚಾರಣೆ ವೇಳೆಯೂ ದರ್ಶನ್, ಪವಿತ್ರಾ ಗೌಡ ಅವರಿಂದ ಅಂತರ ಕಾಯ್ದುಕೊಂಡಿದ್ದರು.
ಸದ್ಯ ದರ್ಶನ್, ಪತ್ನಿ ವಿಜಯಲಕ್ಷ್ಮಿ ಜತೆ ದೇವಸ್ಥಾನ ಭೇಟಿ, ಫಾರ್ಮ್ಹೌಸ್ನಲ್ಲಿ ಸಮಯ ಕಳೆಯುತ್ತಿದ್ದಾರೆ.
ಇತ್ತ ಪವಿತ್ರಾ ತನ್ನ ಬಿಸಿನೆಸ್ನಲ್ಲಿ ಬ್ಯುಸಿಯಾಗಿದ್ದಾರೆ. ತನ್ನ ರೆಡ್ ಕಾರ್ಪೆಟ್ ಸ್ಟುಡಿಯೋ ಬಗೆಗಿನ ಅಪ್ಡೇಟ್ಗಳನ್ನು ಪವಿತ್ರಾ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡುತ್ತಿರುತ್ತಾರೆ.
ಇದೀಗ ಪವಿತ್ರಾ ಗೌಡ, ಡಿ ಬಾಸ್ ಸಫಾರಿಗೆ ಭೇಟಿ ನೀಡಿದ್ದಾರೆ. ನಗರದಲ್ಲಿರುವ ಡಿ ಬಾಸ್ ಸಫಾರಿಗೆ ಪವಿತ್ರಾ ಗೌಡ ಭೇಟಿ ನೀಡಿದ್ದಾರೆ. ಇಲ್ಲಿ ನಟ ದರ್ಶನ್ ಅವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದ ಫೋಟೋಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಸಿಕ್ಕಿರುವ ಮಾಹಿತಿಯಂತೆ ಪವಿತ್ರಾ ಮೂರು ತಿಂಗಳ ಹಿಂದೆ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಡಿ ಬಾಸ್ ಸಫಾರಿಗೆ ಹೋಗಿದ್ದರು. ಈ ಸಮಯದಲ್ಲಿ ಆಪ್ತ ಪ್ರದೀಪ್ ಎನ್ನುವವರು ಈ ವಿಡಿಯೋ ಮಾಡಿದ್ದರು. ಅದನ್ನು ಇದೀಗ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ಅಕ್ಕಾ ನೀವು ಯಾವಾಗಲು ಖುಷಿಯಾಗಿರಬೇಕೆಂದು ಹಾರೈಸಿದ್ದಾರೆ. ಈ ಪೋಸ್ಟ್ ಅನ್ನು ಪವಿತ್ರಾ ರೀಪೋಸ್ಟ್ ಮಾಡಿದ್ದಾರೆ.