ಬೆಂಗಳೂರು: ವಿದೇಶಕ್ಕೆ ಪ್ರಯಾಣಿಸಲು ಈಚೆಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ ಬೆನ್ನಲ್ಲೇ ನಟ ದರ್ಶನ್ ಅವರ ಫ್ಯಾನ್ಸ್ಗೆ ಡೆವಿಲ್ ಸಿನಿಮಾ ಸಂಬಂಧ ಗುಡ್ನ್ಯೂಸ್ ಸಿಕ್ಕಿದೆ.
ಸಿಗರೇಟ್ ಹಿಡಿದು ಅಂಬರೀಶ್ ಕನ್ವರ್ ಲಾಲ್ ಗೆಟಪ್ನಲ್ಲಿ ದರ್ಶನ್ ಅವರು ಎಂಟ್ರಿ ಕೊಟ್ಟಿದ್ದಾರೆ.
ದ ಡೆವಿಲ್ ಚಲನಚಿತ್ರದ ಪ್ರಾಥಮಿಕ ಸಂಭಾಷಣಾ ರೆಕಾರ್ಡಿಂಗ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ದರ್ಶನ್ ಅವರ ನ್ಯೂ ಲುಕ್ನೊಂದಿಗೆ ತಿಳಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಷರತ್ತು ಬದ್ಧ ಜಾಮೀನು ಮೂಲಕ ಹೊರಬಂದಿರುವ ನಟ ದರ್ಶನ್ ಅವರು ಈಗಾಗಲೇ ಸಿನಿಮಾ ಶೂಟಿಂಗ್ನಲ್ಲಿ ತೊಡಗಿದ್ದಾರೆ.
ಸದ್ಯ ಪ್ಯಾಮಿಲಿ ಜತೆ ಸಮಯ ಕಳೆಯುತ್ತಿರುವ ದರ್ಶನ್ ಅವರು ತಮ್ಮ ಪಾರ್ಮ್ಹೌಸ್ನಲ್ಲಿ ಟೈಮ್ ಪಾಸ್ ಮಾಡುತ್ತಿದ್ದಾರೆ.
ಈಚೆಗೆ ವಿದೇಶಕ್ಕೆ ಪ್ರಯಾಣ ಬೆಳೆಸಲು ಅನುಮತಿ ಕೋರಿದ್ದರು. ಈ ಸಂಬಂದ ತೀರ್ಪು ಕಾಯ್ದಿರಿಸಿದ್ದ ಕೋರ್ಟ್ ಇದೀಗ ಷರತ್ತು ಬದ್ಧ ಅನುಮತಿಯನ್ನು ನೀಡಿದೆ. ಇದೇ ಖುಷಿಯಲ್ಲಿದ್ದ ದರ್ಶನ್ ಫ್ಯಾನ್ಸ್ಗೆ ಇದೀಗ ತಮ್ಮ ನೆಚ್ಚಿನ ನಟನ ಸಿನಿಮಾದ ಅಪ್ಡೇಟ್ ಸಿಕ್ಕಿರುವುದು ಅವರ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ.