Select Your Language

Notifications

webdunia
webdunia
webdunia
webdunia

ಏ.28ರಂದು ಬೆಂಗಳೂರು ನಗರ ಬಂದ್‌ : ವಾಟಾಳ್

ಏ.28ರಂದು ಬೆಂಗಳೂರು ನಗರ ಬಂದ್‌ : ವಾಟಾಳ್
ಬೆಂಗಳೂರು , ಬುಧವಾರ, 19 ಏಪ್ರಿಲ್ 2017 (15:33 IST)
ನಾವು ನಡೆಸುತ್ತಿರುವ ಪ್ರತಿಭಟನೆ ಬಾಹುಬಲಿ ಚಿತ್ರದ ವಿರುದ್ಧವಲ್ಲ ಎಂದು ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.
 
ನಮ್ಮ ಪ್ರತಿಭಟನೆ ಬಾಹುಬಲಿ ಚಿತ್ರದಲ್ಲಿ ಕನ್ನಡಿಗರ ವಿರುದ್ಧ ಅಸಭ್ಯವಾಗಿ ಮಾತನಾಡಿರುವ ಕಟ್ಟಪ್ಪ ಪಾತ್ರದ ತಮಿಳುನಟ ಸತ್ಯರಾಜ್ ವಿರುದ್ಧ ಎಂದು ಗುಡುಗಿದ್ದಾರೆ. 
 
ಕನ್ನಡಿಗರ ಬಗ್ಗೆ ಸತ್ಯರಾಜ್ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ. ಅವರು ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
 
ಏಪ್ರಿಲ್ 28 ರಂದು ಯಾವುದೇ ಕಾರಣಕ್ಕೂ ಬಾಹುಬಲಿ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಗೊಳಿಸಲು ಬಿಡುವುದಿಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಮಧ್ಯಾಹ್ನ ತಲೆಬೋಳಿಸಿಕೊಳ್ಳುತ್ತಾರಂತೆ ಸೋನು ನಿಗಂ!