Select Your Language

Notifications

webdunia
webdunia
webdunia
webdunia

ಫಿಲಂ ಚೇಂಬರ್ ನಲ್ಲಿ ಸಂಚಾರಿ ವಿಜಯ್ ಗೆ ಅನ್ಯಾಯ: ಚಂದ್ರಚೂಡ್, ಲಿಂಗದೇವ್ರು ಆಕ್ರೋಶ

ಫಿಲಂ ಚೇಂಬರ್ ನಲ್ಲಿ ಸಂಚಾರಿ ವಿಜಯ್ ಗೆ ಅನ್ಯಾಯ: ಚಂದ್ರಚೂಡ್, ಲಿಂಗದೇವ್ರು ಆಕ್ರೋಶ
ಬೆಂಗಳೂರು , ಶುಕ್ರವಾರ, 18 ಜೂನ್ 2021 (10:20 IST)
ಬೆಂಗಳೂರು: ಮೊನ್ನೆಯಷ್ಟೇ ಅಗಲಿದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಗೆ ಗೌರವ ಸಲ್ಲಿಸದ ಫಿಲಂ ಚೇಂಬರ್ ನಡೆಗೆ ಪತ್ರಕರ್ತ, ಬರಹಗಾರ ಚಕ್ರವರ್ತಿ ಚಂದ್ರಚೂಡ್, ನಿರ್ದೇಶಕ ಲಿಂಗದೇವ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಫಿಲಂ ಚೇಂಬರ್ ನಲ್ಲಿ ಇತ್ತೀಚೆಗೆ ಅಗಲಿದ ಸಿನಿ ಮಂದಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ನಿನ್ನೆ ಆಯೋಜಿಸಲಾಗಿತ್ತು. ಆದರೆ ಇಲ್ಲಿ ವಿಜಯ್ ಫೋಟೋ ಕೂಡಾ ಹಾಕಿರಲಿಲ್ಲ. ಇದು ವಿಜಯ್ ಅಭಿಮಾನಿಗಳು, ಆಪ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಚಂದ್ರಚೂಡ್, ನಿಮ್ಮ ಶ್ರದ್ಧಾಂಜಲಿ ಸಭೆಯಲ್ಲಿ ನನ್ನ ಗೆಳೆಯ ಸಂಚಾರಿ ವಿಜಯ್ ದೊಂದು ಭಾವಚಿತ್ರ ಇಡಲು ಅಸಾಧ್ಯವಾಯಿತೇ? ನಿಮಗೊಂದು ಧಿಕ್ಕಾರ ಎಂದಿದ್ದಾರೆ. ಇನ್ನು ನಿರ್ದೇಶಕ ಲಿಂಗದೇವ್ರು ಕೂಡಾ ಸುದೀರ್ಘ ಬರವಣಿಗೆ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಗತಿಸಿದವರು ರಾಷ್ಟ್ರಪ್ರಶಸ್ತಿ ವಿಜೇತ ನಟರು, ಅಂಗದಾನ ಮಾಡಿ ಮಾದರಿಯಾದವರು. ಸರ್ಕಾರವೇ ಸರ್ಕಾರಿ ಗೌರವ ನೀಡಿ ವಿದಾಯ ಹೇಳಿತ್ತು. ಹಾಗಿರುವಾಗ ಪ್ರಾತಿನಿಧಿಕ ಸಂಸ್ಥೆಯಲ್ಲಿ ಗೌರವ ಸಲ್ಲಿಸದೇ ಇರುವುದು ಅವರ ಕುಟುಂಬಕ್ಕೆ ತೋರಿದ ಅಗೌರವ ಎಂದಿದ್ದಾರೆ. ಅಭಿಮಾನಿಗಳೂ ಫಿಲಂ ಚೇಂಬರ್ ನಡೆಗೆ ಆಕ್ರೋಶ  ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಚಾರಿ ವಿಜಯ್ ಹೆಸರಿನಲ್ಲಿ ಚಕ್ರವರ್ತಿ ಚಂದ್ರಚೂಡ್ ಮಾಡಿದ ಒಳ್ಳೆ ಕೆಲಸ