Select Your Language

Notifications

webdunia
webdunia
webdunia
webdunia

ಅಭ್ಯರ್ಥಿಯಾಗುವ ಆಸೆ ಇಲ್ಲ ಎಂದ ನಿಖಿಲ್ ಕುಮಾರ ಸ್ವಾಮಿ

ಅಭ್ಯರ್ಥಿಯಾಗುವ ಆಸೆ ಇಲ್ಲ ಎಂದ ನಿಖಿಲ್ ಕುಮಾರ ಸ್ವಾಮಿ
ರಾಮನಗರ , ಶನಿವಾರ, 9 ಡಿಸೆಂಬರ್ 2017 (17:43 IST)
ರಾಮನಗರ: ‘ನನಗೆ ಅಭ್ಯರ್ಥಿಯಾಗುವ ಆಸೆ ಇಲ್ಲ. ನನ್ನ ತಂದೆಗೋಸ್ಕರ ರಾಜ್ಯದಲ್ಲಿ ಜೆ.ಡಿ.ಎಸ್. ಪರವಾಗಿ ಪ್ರಚಾರ ಮಾಡುವೆ' ಎಂದು  ನಿಖಿಲ್ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಹೇಳಿಕೆ ನೀಡಿದ್ದಾರೆ.


ಪಕ್ಷದ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪಕ್ಷದ ಮುಖಂಡರು ತೀರ್ಮಾನ ಮಾಡುತ್ತಾರೆ. 75 ದಿನಗಳ ಕುರುಕ್ಷೇತ್ರ ಚಿತ್ರದ ಶೂಟಿಂಗ್ ಮುಗಿದಿದ್ದು, ಡಿ.16 ರಂದು ಚಿತ್ರದ  ಮೊದಲ ಟೀಸರ ಬಿಡುಗಡೆಯಾಗಲಿದೆ. ಹಾಗೆ ಅಂದು ತಮ್ಮ ತಂದೆಯ ಹುಟ್ಟು ಹಬ್ಬದ ಸಂಭ್ರಮವಿರುದಾಗಿ ಹೇಳಿದ್ದಾರೆ.


ಚಿತ್ರದ  ಮೊದಲ ಟೀಸರನ್ನು ಮಾಗಡಿಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸದ್ಯಕ್ಕೆ ತಾನು ಚಿತ್ರರಂಗದಲ್ಲಿ ಇದ್ದೇನೆ, ಚುನಾವಣೆಗೆ ನಿಲ್ಲುವ ಬಗ್ಗೆ ಮುಂದಿನ ದಿನಗಳಲ್ಲಿ ನೋಡೋಣ ಎಂದು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಯಿಂದ ವೈಷ್ಣವಿ ಗೇಟ್ ಪಾಸ್! ಕಾರಣ ಏನು ಗೊತ್ತಾ...?