ಆಸ್ಕರ್ ಗೆ ಆರ್ ಆರ್ ಆರ್ ಆಯ್ಕೆಯಾಗದಿರುವುದಕ್ಕೆ ಆಯ್ಕೆ ಸಮಿತಿ ಅಧ್ಯಕ್ಷ ನಾಗಾಭರಣ ಸ್ಪಷ್ಟನೆ

Webdunia
ಗುರುವಾರ, 22 ಸೆಪ್ಟಂಬರ್ 2022 (09:00 IST)
ಬೆಂಗಳೂರು: ಈ ಬಾರಿ ಆಸ್ಕರ್ ಗೆ ಭಾರತದಿಂದ ಆರ್ ಆರ್ ಆರ್ ಸಿನಿಮಾ ವಿದೇಶೀ ಸಿನಿಮಾ ವಿಭಾಗದಲ್ಲಿ ಆಯ್ಕೆಯಾಗುತ್ತದೆಂದೇ ಎಲ್ಲರ ನಿರೀಕ್ಷೆಯಾಗಿತ್ತು.

ಆದರೆ ಕೊನೆಯ ಕ್ಷಣದಲ್ಲಿ ಗುಜರಾತಿ ಸಿನಿಮಾ ಚೆಲ್ಲೋ ಶೋ ಆಯ್ಕೆಯಾಗಿತ್ತು. ಇದು ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಆರ್ ಆರ್ ಆರ್ ತಿರಸ್ಕೃತವಾಗಿದ್ದಕ್ಕೆ ಆಯ್ಕೆ ಸಮಿತಿ ಅಧ್ಯಕ್ಷ ಟಿ.ಎಸ್. ನಾಗಾಭರಣ ಸ್ಪಷ್ಟನೆ ನೀಡಿದ್ದಾರೆ.

‘ಒಂದು ಸಿನಿಮಾ ಆಸ್ಕರ್ ಗೆ ಆಯ್ಕೆಯಾಗಲು ಅದರ ಮಾರ್ಕೆಟಿಂಗ್, ಮಾಸ್ ಅಂಶ ಮುಖ್ಯವಾಗುವುದಿಲ್ಲ. ಕತೆ ಮುಖ್ಯ. ಆಸ್ಕರ್ ಗೆ ಆಯ್ಕೆಯಾಗಲು ಸ್ಪರ್ಧೆಗೆ ಬಂದಿದ್ದ ಎಲ್ಲಾ ಸಿನಿಮಾಗಳೂ ಅತ್ಯುತ್ತಮವಾಗಿತ್ತು. ಆರ್ ಆರ್ ಆರ್ ಕೂಡಾ ಉತ್ತಮ ಸಿನಿಮಾವೇ. ಆದರೆ ಅಂತಿಮವಾಗಿ ಚೆಲ್ಲೋ ಶೋ ಭಾರತವನ್ನು ಪ್ರತಿನಿಧಿಸುವ ಕತೆ ಹೊಂದಿರುವ ಸಿನಿಮಾ, ಒಂದು ವಿಭಿನ್ನ ಸಿನಿಮಾ ಎಂಬ ಕಾರಣಕ್ಕೆ ಆಯ್ಕೆಯಾಯಿತು. ಇದರಿಂದ ಉಳಿದವರಿಗೆ ನಿರಾಸೆಯಾಗಿರಬಹುದು. ಆದರೆ ಚೆಲ್ಲೋ ಶೋ ಭಾರತವನ್ನು ಪ್ರತಿನಿಧಿಸುವ ಒಂದು ವಿಭಿನ್ನ ಸಿನಿಮಾ’ ಎಂದು ನಾಗಾಭರಣ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮತ್ತೇ ಪ್ರೀತಿಯಲ್ಲಿ ಬಿದ್ರಾ ಸಾನಿಯಾ ಮಿರ್ಜಾ, ಕುತೂಹಲ ಮೂಡಿಸಿದ ಈ ಫೋಟೋ

ಮಧ್ಯದ ಬೆರಳು ತೋರಿಸಿ ದುರ್ವತನೆ ತೋರಿದ ಆರ್ಯನ್ ಖಾನ್‌ಗೆ ಬಿಗ್‌ ಶಾಕ್‌

ಎರಡನೇ ಬಾರಿ ಜೈಲು ಸೇರಿದ ದರ್ಶನ್ ಎಷ್ಟು ತೂಕ ಇಳಿಸಿಕೊಂಡಿದ್ದಾರೆ: ಶಾಕಿಂಗ್

ಡಿಡಿಎಲ್‌ಜಿಗೆ 30 ವರ್ಷ: ಲಂಡನ್‌ನಲ್ಲಿ ಗಮನ ಸೆಳೆದ ಶಾರುಖ್‌, ಕಾಜೋಲ್ ಜೋಡಿ

ಕಾಂತಾರ 2ರ ನಟ ನಟಿಗೆ ಐಎಂಡಿಬಿ ಟಾಪ್ ಪಟ್ಟಿಯಲ್ಲಿ ಸ್ಥಾನ, ಯಾರಿಗೆ ಗೊತ್ತಾ

ಮುಂದಿನ ಸುದ್ದಿ
Show comments