Webdunia - Bharat's app for daily news and videos

Install App

ಮಾನವೀಯತೆ ಮೆರೆದ ನಾದಬ್ರಹ್ಮ ಹಂಸಲೇಖ

Webdunia
ಸೋಮವಾರ, 18 ಡಿಸೆಂಬರ್ 2017 (08:18 IST)
ಬೆಂಗಳೂರು: ಜೀ ಕನ್ನಡ ವಾಹಿನಿಯ ಸರಿಗಮಪ ವೇದಿಕೆಯ ಮೇಲೆ ಮಂಡ್ಯ ಜಿಲ್ಲೆಯಿಂದ ಬಂದ ಸೃಜನ್ ದರ್ಶನ್ ಅವರ ಚಕ್ರವರ್ತಿ ಚಿತ್ರದ ಟೈಟಲ್ ಹಾಡನ್ನು ಹಾಡಿದ್ದನು. ಸೃಜನ್ ನಲ್ಲಿ ಏನೋ ಒಂದು ಪ್ರತಿಭೆಯನ್ನು ಗುರುತಿಸಿದ ಹಂಸಲೇಖ ಅವರು ಆತನನ್ನು ಆಯ್ಕೆ ಮಾಡಿದ್ದರು.  ಹಾಗೆ ಉಳಿದ ತೀರ್ಪುಗಾರರು ಕೂಡ ಆ ಹುಡುಗನ್ನು ಆಯ್ಕೆ ಮಾಡಿದರು.


ಸೃಜನ್ ಯಾವುದೇ ಸಂಗೀತ ಶಾಲೆಗೆ ಹೋಗಿ ಕಲಿತವನಲ್ಲ.ತಾನಾಗಿಯೇ ಮೊಬೈಲ್ ನಲ್ಲಿ ಹಾಡು ಕೇಳಿ ಕಲಿತವನು. ಈತ ಇಲ್ಲಿಗೆ ಬರಬೇಕೆಂದು  ತಾನು ಮುದ್ದಾಗಿ ಸಾಕಿದ ಕರುವನ್ನು ಮಾರಿ ಅದರಿಂದ ಬಂದ ಹಣದಿಂದ ಬಟ್ಟೆ, ಶೂ ಧರಿಸಿ ಬಂದಿದ್ದಾನೆ ಎಂಬುದು ಆತನ ತಂದೆಯಿಂದ ತಿಳಿಯಿತು.


ಈ ಮಾತನ್ನು ಕೇಳಿ ನೊಂದ ಹಂಸಲೇಖ ಅವರು ತಾನು ಹಣ ಕೊಡುತ್ತೇನೆ, ಆ ಕರುವನ್ನು ವಾಪಾಸು ತಂದು ಸೃಜನ್ ಗೆ ಕೊಡಿಸಿ ಎಂದಾಗ ಸೃಜನ್ ಕಣ್ಣಲ್ಲಿ ಸಂತಸದ ಕಣ್ಣೀರು ಹರಿಯಿತು.ಅಲ್ಲದೇ ಹಂಸಲೇಖ ಅವರು  ಸೃಜನ್ ಗೆ ತಮ್ಮ ಸಂಗೀತ ಶಾಲೆಯಲ್ಲಿ ಉಚಿತವಾಗಿ ಸಂಗೀತ ಹೇಳಿಕೊಡುವುದಾಗಿ ಹೇಳಿದ್ದಾರೆ. ಹಾಗೇ ಊರಿಗೆ ಹೋಗಿ ಬರಲು ಬಸ್ಸ್ ಚಾರ್ಜ್ ಕೂಡ ತಾವೇ ಕೊಡುವುದಾಗಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments