Select Your Language

Notifications

webdunia
webdunia
webdunia
webdunia

ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಚಿತ್ರದಿಂದ ಹಿಂದೆ ಸರಿದ ವಿಜಯ್ ಸೇತುಪತಿ

ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಚಿತ್ರದಿಂದ ಹಿಂದೆ ಸರಿದ ವಿಜಯ್ ಸೇತುಪತಿ
ಚೆನ್ನೈ , ಬುಧವಾರ, 21 ಅಕ್ಟೋಬರ್ 2020 (10:08 IST)
ಚೆನ್ನೈ : ಬೌಲರ್ ಮುತ್ತಯ್ಯ ಮುರಳೀಧರನ್ ಅವರ  ಜೀವನಕಥೆ ಆಧಾರಿತ ಸಿನಿಮಾದಲ್ಲಿ ನಟ ವಿಜಯ್ ಸೇತುಪತಿ ಅವರು ನಟಿಸುವ ಬಗ್ಗೆ ವಿವಾದ ಏರ್ಪಟ್ಟಿತ್ತು. ಇದೀಗ ಆ ವಿವಾದ ಕೊನೆಗೊಂಡಿದೆ ಎನ್ನಲಾಗಿದೆ.

ಹೌದು. ಶ್ರೀಲಂಕಾ ಮಣ್ಣಿನ ಬಗ್ಗೆ ಹೆಮ್ಮೆಪಡುವ ಮುತ್ತಯ್ಯ ಮುರಳೀಧರನ್  ಜೀವನಾಧಾರಿತ ಚಿತ್ರದಲ್ಲಿ ವಿಜಯ್ ಸೇತುಪತಿ ಮುರಳೀಧರನ್  ಪಾತ್ರ ನಿರ್ವಹಿಸುವುದು ಹಲವರಿಗೆ ಇಷ್ಟವಿರಲಿಲ್ಲ. ವಿಜಯ್ ಸೇತುಪತಿ ಈ ಚಿತ್ರವನ್ನು ಕೈಬಿಡಬೇಕೆಂದು ಅನೇಕ ಗಣ್ಯರು ಹೇಳಿದ್ದರು.

ಈ ಬಗ್ಗೆ ಸಮಸ್ಯೆ ಮುಂದುವರಿಯುತ್ತಿದ್ದಂತೆ ವಿಜಯ್ ಸೇತುಪತಿ ಚಿತ್ರದಿಂದ ಹಿಂದೆ ಸರಿಯುವಂತೆ ಮುರಳೀಧರನ್  ಅವರು ತಿಳಿಸಿದ್ದಾರೆ. ಆದಕಾರಣ ಅವರ ಮನವಿಯಂತೆ ವಿಜಯ್ ಸೇತುಪತಿ ಚಿತ್ರದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಬರ್ಟ್ ಬಿಡುಗಡೆ ದಿನಾಂಕ ವದಂತಿ: ನಿರ್ಮಾಪಕರು ಹೇಳಿದ್ದೇನು?