Webdunia - Bharat's app for daily news and videos

Install App

ತೆಲುಗು ಜನ ದೇಶವನ್ನೇ ಆಳಲಿದ್ದಾರೆ: ಸಚಿವ ಮಲ್ಲ ರೆಡ್ಡಿ ವಿವಾದಿತ ಹೇಳಿಕೆಗೆ ರಣಬೀರ್ ಪ್ರತಿಕ್ರಿಯೆ ಹೇಗಿತ್ತು?

Webdunia
ಮಂಗಳವಾರ, 28 ನವೆಂಬರ್ 2023 (10:40 IST)
Photo Courtesy: Twitter
ಹೈದರಾಬಾದ್: ಹೈದರಾಬಾದ್ ನಲ್ಲಿ ನಡೆದ ಅನಿಮಲ್ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ತೆಲಂಗಾಣದ ಸಚಿವ ಮಲ್ಲ ರೆಡ್ಡಿ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ.

ಅನಿಮಲ್ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ನಿರ್ದೇಶಕ ರಾಜಮೌಳಿ, ಮಹೇಶ್ ಬಾಬುರಂತಹ ಘಟಾನುಘಟಿಗಳು ಬಂದಿದ್ದರು. ಅವರ ಜೊತೆಗೆ ಸಚಿವ ಮಲ್ಲ ರೆಡ್ಡಿ ಕೂಡಾ ವೇದಿಕೆಗೆ ಬಂದು ಮಾತನಾಡಿದ್ದರು.

ಆದರೆ ಮಾತಿನ ನಡುವೆ ರಣಬೀರ್ ಕಪೂರ್ ಉದ್ದೇಶಿಸಿ ಸಚಿವರು ‘ಮುಂದಿನ ಐದು ವರ್ಷಗಳಲ್ಲಿ ತೆಲುಗು ಜನ ಕೇವಲ ಹಾಲಿವುಡ್, ಬಾಲಿವುಡ್ ಮಾತ್ರವಲ್ಲ, ಇಡೀ ದೇಶವನ್ನೇ ಆಳಲಿದ್ದಾರೆ. ನೀವೂ ಸದ್ಯದಲ್ಲೇ ಹೈದರಾಬಾದ್ ಗೆ ಶಿಫ್ಟ್ ಆಗುತ್ತೀರಿ. ಯಾಕೆ ಕೇಳಿ? ಯಾಕೆಂದರೆ ಮುಂಬೈ ಹಳೆಯದಾಯಿತು. ಬೆಂಗಳೂರಲ್ಲಿ ಟ್ರಾಫಿಕ್‍ ಹೆಚ್ಚಾಗಿದೆ. ಹೈದರಾಬಾದ್ ಮಾತ್ರವೇ ದೇಶದಲ್ಲಿ ಚೆನ್ನಾಗಿರುವ ನಗರ’ ಎಂದಿದ್ದಾರೆ. ಅವರ ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

ಮಲ್ಲ ರೆಡ್ಡಿ ವೇದಿಕೆಯಲ್ಲಿ ಹೀಗೆ ಹೇಳುತ್ತಿದ್ದರೆ ಕುಳಿತಿದ್ದ ರಣಬೀರ್ ಮುಖದಲ್ಲಿ ಇಲ್ಲದ ನಗು ತಂದುಕೊಂಡು ಕೂತಿದ್ದರು. ಸಚಿವರ ಈ ಹೇಳಿಕೆ ಅಲ್ಲಿದ್ದವರಿಗೆ ಕೊಂಚ ಇರಿಸು ಮುರಿಸು ಉಂಟುಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ರಣಬೀರ್ ತಾಳ್ಮೆಗೆ ಮೆಚ್ಚಲೇ ಬೇಕು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments