Webdunia - Bharat's app for daily news and videos

Install App

ಟೀಸರ್ ಮೂಲಕ ಮತ್ತೆ ಸದ್ದು ಮಾಡಿತು ಮೀನಾ ಬಜಾರ್!

Webdunia
ಮಂಗಳವಾರ, 1 ಅಕ್ಟೋಬರ್ 2019 (14:13 IST)
ಕಿರುತೆರೆ ಜಗತ್ತಿನ ಸ್ಟಾರ್ ನಿರ್ದೇಶಕರೆಂದೇ ಹೆಸರಾಗಿರುವವರು ರಾಣಾ ಸುನೀಲ್ ಕುಮಾರ್ ಸಿಂಗ್. ಈ ಹಿಂದೆ ಮದುವೆ ಮನೆ ಎಂಬ ಚಿತ್ರದ ಮೂಲಕ ಹಿರಿತೆರೆಗೂ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿ ಗೆಲುವು ಕಂಡಿದ್ದ ಅವರೀಗ ತಿತಿತಿ.ಮೀನಾ ಬಜಾರ್. ಕಾಮ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅವರು ವರ್ಷಾಂತರಗಳ ಕಾಲ ಶ್ರಮ ವಹಿಸಿ ರೂಪಿಸಿರೋ ಮೀನಾ ಬಜಾರ್ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ. ಅದು ಮತ್ತಷ್ಟು ತೀವ್ರವಾಗುವಂಥಾ ಟೀಸರ್ ಇದೀಗ ಬಿಡುಗಡೆಗೊಂಡಿದೆ.
ಈಗಾಗಲೇ ಈ ಸಿನಿಮಾದ ಅದ್ದೂರಿ ಮೇಕಿಂಗ್ ಮುನ್ಸೂಚನೆ ಮತ್ತು ಭಿನ್ನ ಕಥಾನಕದ ಸುಳಿವಿನೊಂದಿಗೆ ಪ್ರೇಕ್ಷಕರನ್ನು ಸೆಳೆದಿಟ್ಟುಕೊಂಡಿದೆ. ಇದೀಗ ಬಿಡುಗಡೆಯಾಗಿರೋ ಟೀಸರ್ನಲ್ಲಿಯಂತೂ ಆ ಕುತೂಹಲ ಇಮ್ಮಡಿಸುವಂಥಾ ಅಂಶಗಳೇ ಢಾಳಾಗಿವೆ. ಇದು ಮೋಹಕ ಅಂಶಗಳು ಮತ್ತು ನಿಗೂಢ ಕಥಾ ಹಂದರದ ಸಮ್ಮಿಶ್ರಣದೊಂದಿಗೇ ಮನ ಸೆಳೆಯುವಂಥಾ ಟೀಸರ್. ಇಲ್ಲಿ ಪ್ರಧಾನವಾಗಿ ದೃಷ್ಯ ಶ್ರೀಮಂತಿಕೆ ಕಣ್ಣಿಗೆ ಕಟ್ಟುವಂತಿದೆ. ಇದರೊಂದಿಗೇ ಅದೇನು ಹರಸಾಹಸ ಪಟ್ಟರೂ ಊಹಿಸಲು ಸಾಧ್ಯವಾಗದಂಥಾ ಕಥೆಯ ಮರ್ಮದೊಂದಿಗೆ ಈ ಟೀಸರ್ ಈಗ ಎಲ್ಲೆಡೆ ಹರಿದಾಡುತ್ತಾ ವ್ಯಾಪಕವಾಗಿಯೇ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
 
ಮೀನಾ ಬಜಾóರ್ ಕನ್ನಡ ಮಾತ್ರವಲ್ಲದೇ ಏಕ ಕಾಲದಲ್ಲಿಯೇ ತೆಲುಗಿನಲ್ಲಿಯೂ ರೆಡಿಯಾಗಿದೆ. ಪ್ರತಿಯೊಂದನ್ನೂ ಕೂಡಾ ಒಂದೇ ಸಲಕ್ಕೆ ಮಾಡಿ ಎರಡೂ ಭಾಷೆಗಳಲ್ಲಿ ಈ ಸಿನಿಮಾವನ್ನು ರೂಪಿಸಲಾಗಿದೆಯಂತೆ. ಕನ್ನಡದಕ್ಕೆ ಬೆಂಗಳೂರಿನಲ್ಲಿ ಹಾಗೂ ತೆಲುಗಿಗೆ ಹೈದ್ರಾಬಾದಿನಲ್ಲಿ ಡಬ್ಬಿಂಗ್ ಕೂಡಾ ನಡೆದಿದೆ. ಆಗಾಗ ಹೊರ ಬರುತ್ತಿರೋ ಈ ಸಿನಿಮಾ ಪೋಸ್ಟರುಗಳೇ ಪ್ರೇಕ್ಷಕರನ್ನು ಸೆಳೆದುಕೊಂಡಿವೆ. ರಾಣಾ ಸುನೀಲ್ ಕುಮಾರ್ ಸಿಂಗ್ ಅವರ ಧಾರಾವಾಹಿಗಳ ಅದ್ದೂರಿತನದ ಪರಿಚಯವಿರುವವರಿಗೆ ಖಂಡಿತಾ ಮೀನಾ ಬಜಾರಿನ ಮೇಲೂ ನಿರೀಕ್ಷೆಗಳಿವೆ. ಈಗ ಹೊರ ಬಂದಿರೋ ಟೀಸರ್ ಮೂಲಕ ಬಿಡುಗಡೆಯ ಕಡೇ ಕ್ಷಣಗಳಲ್ಲಿ ಮೀನಾ ಬಜಾರ್ ಮತ್ತೆ ಸದ್ದು ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿ ನಿರೂಪಕಿ ಅನುಶ್ರೀ ಎಷ್ಟೊಂದು ಸಿಂಪಲ್‌, ಮದುವೆ ಸೀರೆ ಬಗ್ಗೆ ಕೊಟ್ರು ಬಿಗ್‌ ಅಪ್ಡೇಟ್‌

Amrithadhare serial: ಅಮೃತಧಾರೆಯಲ್ಲಿ ಮಹಾ ತಿರುವು, ಕನ್ನಡದಲ್ಲಿ ಅಪರೂಪಕ್ಕೆ ನಡೆಯುತ್ತಿದೆ ಇಂಥಾ ಟ್ವಿಸ್ಟ್

ಖ್ಯಾತ ಕಿರುತೆರೆ ನಟ ಆಶಿಶ್ ಕಪೂರ್ ಮೇಲೆ ಇದೆಂಥಾ ಆರೋಪ, ಜೈಲು ಸೇರುವ ಪರಿಸ್ಥಿತಿ ಹಾಕೆ ಬಂತು

ಜಿಎಸ್ ಟಿ ದರ ಕಡಿತವಾದ್ರೂ ಕನ್ನಡ ಸಿನಿಮಾ ವೀಕ್ಷಕರಿಗೆ ಲಾಭವಿಲ್ಲ

ನಾನು ಸ್ವಲ್ಪ ಸ್ಲೋ ಎನಿಸಬಹುದು ಆದ್ರೆ.. ರಕ್ಷಿತ್ ಶೆಟ್ಟಿ ಹೇಳಿದ ಮಾತು ನೋಡಿ video

ಮುಂದಿನ ಸುದ್ದಿ