Select Your Language

Notifications

webdunia
webdunia
webdunia
webdunia

ಮಾಸ್ತಿಗುಡಿ ನಿರ್ಮಾಪಕರಿಗೆ ಕಡೆಗೂ ಸಿಕ್ತು ಜಾಮೀನು

ಮಾಸ್ತಿಗುಡಿ ನಿರ್ಮಾಪಕರಿಗೆ ಕಡೆಗೂ ಸಿಕ್ತು ಜಾಮೀನು
Bangalore , ಶುಕ್ರವಾರ, 23 ಡಿಸೆಂಬರ್ 2016 (13:46 IST)
ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಸಂಭವಿಸಿದ ದುರಂತದಲ್ಲಿ ಇಬ್ಬರು ಖಳನಟರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ ಅವರಿಗೆ ಗುರುವಾರ ರಾತ್ರಿ ಜಾಮೀನು ಸಿಕ್ಕಿದೆ. ದುನಿಯಾ ವಿಜಯ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದು.
 
ದುನಿಯಾ ವಿಜಿಗೆ ಆತ್ಮೀಯ ಗೆಳೆಯನೂ ಆಗಿರುವ ಸುಂದರ್ ಅವರೊಂದಿಗೆ ಈ ಹಿಂದೆ ಜಾಕ್ಸನ್ ಚಿತ್ರವನ್ನು ನಿರ್ಮಿಸಿದ್ದರು. ಮಾಸ್ತಿಗುಡಿ ಚಿತ್ರೀಕರಣ ಅವಘಡದಲ್ಲಿ ನಿರ್ಮಾಪಕರ ಪಾತ್ರ ಇಲ್ಲದಿದ್ದರೂ ಸುಂದರ್ ಅವರನ್ನು ಬಂಧಿಸಲಾಗಿತ್ತು. ಒಂದು ತಿಂಗಳ ಕಾಲ ಜೈಲಿನಲ್ಲಿರಬೇಕಾಯಿತು. 
 
ಚಿತ್ರದ ಸ್ಟಂಟ್ ಮಾಸ್ಟರ್ ರವಿವರ್ಮಾ ಮತ್ತು ನಿರ್ದೇಶಕ ನಾಗಶೇಖರ್ ಅವರಿಗೆ ಜಾಮೀನು ಸಿಕ್ಕಿ ಬಿಡುಗಡೆಯಾಗಿದ್ದಾರೆ. ಆದರೆ ಸುಂದರ್ ಗೌಡ ಮಾತ್ರ ಒಂದು ತಿಂಗಳ ಕಾಲ ಜೈಲಿನಲ್ಲೇ ಕೊಳೆಯುವಂತಾಗಿತ್ತು. ಈ ಘಟನೆಯಲ್ಲಿ ನಿರ್ಮಾಪಕರ ಪಾತ್ರ ಇಲ್ಲದಿರುವುದು ಎಲ್ಲರಿಗೂ ಗೊತ್ತಿದ್ದರೂ ನಸೀಬು ಅವರನ್ನು ಜೈಲಿಗೆ ಹೋಗುವಂತೆ ಮಾಡಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಕಾಳಿಗಿಂತ ಜೊಳ್ಳೇ ಜಾಸ್ತಿ