Select Your Language

Notifications

webdunia
webdunia
webdunia
webdunia

ಮಾಗಡಿ ರಸ್ತೆ ದುರಂತ, ನಿರ್ದೇಶಕರಿಗೆ ಬಿಡುಗಡೆ ಭಾಗ್ಯ

ಮಾಸ್ತಿಗುಡಿ ದುರಂತ
Bangalore , ಮಂಗಳವಾರ, 20 ಡಿಸೆಂಬರ್ 2016 (11:26 IST)
ಮಾಸ್ತಿಗುಡಿ ಚಿತ್ರದ ಖಳನಟರಾದ ಅನಿಲ್ ಮತ್ತು ಉದಯ್ ದುರಂತ ಸಾವಿನ ವಿಚಾರವಾಗಿ ಜೈಲು ಸೇರಿದ್ದ ನಿರ್ದೇಶಕ ನಾಗಶೇಖರ್ ಮತ್ತು ಸಾಹಸ ನಿರ್ದೇಶಕ ರವಿವರ್ಮಾ ಅವರಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದ್ದು ಸೋಮವಾರ ಬಿಡುಗಡೆಯಾಗಿದ್ದಾರೆ. 
 
ನಾಗಶೇಖರ್ ಮತ್ತು ರವಿವರ್ಮಾ ಅವರಿಗೆ ಡಿಸೆಂಬರ್ 15ರಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಅಂದೇ ರವಿವರ್ಮಾ ಬಿಡುಗಡೆಯಾಗಿ ಅವರ ಸ್ವಸ್ಥಳ ನಾಗಮಂಗಲದಲ್ಲಿದ್ದಾರೆ. ಇನ್ನು ನಿರ್ದೇಶಕರಾದ ನಾಗಶೇಖರ್ ಸೋಮವಾರ ರಾತ್ರಿ ಬಿಡುಗಡೆಯಾಗಿದ್ದಾರೆ.
 
ಇನ್ನೂ ಜೈಲಿನಲ್ಲೇ ಇರುವ ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ ಅವರಿಗೆ ಜಾಮೀನು ಸಿಕ್ಕಿಲ್ಲ. ಈ ಪ್ರಕರಣದ ಇನ್ನೊಬ್ಬ ಆರೋಪಿ ಯೂನಿಟ್ ಮ್ಯಾನೇಜರ್ ಭರತ್‌ಗೆ ಜಾಮೀನು ಸಿಕ್ಕಿದೆ. ಘಟನೆಯ ಹಿನ್ನೆಲೆಯಲ್ಲಿ ಚಿತ್ರದ ನಾಯಕ ನಟ ದುನಿಯಾ ವಿಜಯ್ ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಕ್ಯ ಮಂಡಳಿ ಚಿತ್ರಗಳಲ್ಲಿ ಅಭಿನಯಿಸದಂತೆ ನಿಷೇಧ ಹೇರಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೂಗಲ್ ಸರ್ಚ್‌ನಲ್ಲಿ ’ಬಾಸ್’ ಚಾಲೆಂಜಿಗ್ ಸ್ಟಾರ್ ದರ್ಶನ್