ಬಾಲಿವುಡ್ ನಟರಿಗೆ ಹೋಲಿಸಿದರೆ ಮಹೇಶ್ ಬಾಬು, ಜ್ಯೂ ಎನ್ ಟಿಆರ್ ವಿನಯವಂತರಲ್ಲ

Krishnaveni K
ಸೋಮವಾರ, 10 ಜೂನ್ 2024 (11:27 IST)
ಮುಂಬೈ: ಬಾಲಿವುಡ್ ನಟರಿಗೆ ಹೋಲಿಸಿದರೆ ಟಾಲಿವುಡ್ ಸ್ಟಾರ್ ಗಳಾದ ಮಹೇಶ್ ಬಾಬು, ವಿಜಯ್ ದೇವರಕೊಂಡ, ಜ್ಯೂ ಎನ್ ಟಿಆರ್ ಮೊದಲಾದವರು ವಿನಯವಂತರಲ್ಲ, ಅವರೆಲ್ಲಾ ವಿನಯವಂತಿಕೆಯ ಮುಖವಾಡ ಹಾಕುತ್ತಿದ್ದಾರಷ್ಟೇ ಎಂದು ಫೋಟೋಗ್ರಾಫರ್ ವರಿಂದರ್ ಚಾವ್ಲಾ ಹೇಳಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿ, ಸೆಲೆಬ್ರಿಟಿ ಈವೆಂಟ್ ಗಳಲ್ಲಿ ಹಾಜರಾಗುವ ಪಪ್ಪಾರಾಜಿಗಳ ಪೈಕಿ ವರಿಂದರ್ ಕೂಡಾ ಒಬ್ಬರು. ಅವರು ಬಾಲಿವುಡ್ ಸ್ಟಾರ್ ಗಳ ಜೊತೆ ಟಾಲಿವುಡ್ ಸ್ಟಾರ್ ಗಳನ್ನು ಹೋಲಿಕೆ ಮಾಡಿದ್ದು, ಟಾಲಿವುಡ್ ನಟರ  ವಿನಯವಂತಿಕೆ ಎಲ್ಲಾ ತೋರಿಕೆಯಷ್ಟೇ, ನಿಜವಾಗಿಯೂ ಅವರು ಅಷ್ಟು ವಿನಯವಂತರಲ್ಲ ಎಂದಿದ್ದಾರೆ.

ಟಾಲಿವುಡ್ ನಟರು ತುಂಬಾ ವಿನಯವಂತರು, ಅಭಿಮಾನಿಗಳ ಜೊತೆ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಂಡುಬರುತ್ತದೆ. ಆದರೆ ಅವರು ಬಾಲಿವುಡ್ ನಟರಷ್ಟೂ ಸಹಿಷ್ಣುಗಳು, ವಿನಯವಂತಿಕೆ ಉಳ್ಳವರು ಅಲ್ಲ. ಕೇವಲ ಕ್ಯಾಮರಾ ಎದುರು ಮಾತ್ರ ತೋರಿಕೆಗಾಗಿ ಆ ರೀತಿ ಇದ್ದಾರಷ್ಟೇ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ವರಿಂದರ್ ಇತ್ತೀಚೆಗೆ ಜ್ಯೂ ಎನ್ ಟಿಆರ್ ತಮ್ಮನ್ನು ಹಿಂಬಾಲಿಸಿ ವಿಡಿಯೋ ಮಾಡಿದ ಪಪ್ಪಾರಾಜಿ ವಿರುದ್ಧ ಆಕ್ರೋಶಗೊಂಡಿದ್ದನ್ನು ಉಲ್ಲೇಖಿಸಿದ್ದಾರೆ. ಜೊತೆಗೆ ಮಹೇಶ್ ಬಾಬು ತಮ್ಮನ್ನು ಬಾಲಿವುಡ್ಡಿಗರಿಗೆ ಕೊಳ್ಳಲು ಸಾಧ್ಯವಿಲ್ಲ ಎಂದು ಅಹಂಕಾರದಿಂದ ಹೇಳಿಕೆ ನೀಡಿದ್ದನ್ನು ಉಲ್ಲೇಖಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸ್ಟಾರ್ ನಟನ ಜತೆ ತೆಲುಗಿನಲ್ಲಿ ಬಿಗ್ ಆಫರ್ ಗಿಟ್ಟಿಸಿಕೊಂಡ ನಟಿ ಚೈತ್ರಾ ಆಚಾರ್‌

ಮತ್ತೇ ನಿರ್ಮಾಪಕ ಜತೆ ಕಾಣಿಸಿಕೊಂಡ ಸಮಂತಾ ರುತ್ ಪ್ರಭು, ಪ್ರೀತಿ ಪಕ್ಕಾ ಎಂದ ಫ್ಯಾನ್ಸ್‌

ನಿಶ್ಚಿತಾರ್ಥ ವದಂತಿ ಬೆನ್ನಲ್ಲೇ ಫ್ಯಾನ್ಸ್‌ಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ರಾ ರಶ್ಮಿಕಾ, ವಿಜಯ್ ದೇವರಕೊಂಡ

BB Season 12: ದೊಡ್ಮನೆಯಲ್ಲಿ ಸದ್ದು ಮಾಡುತ್ತಿರುವ ಸ್ಪರ್ಧಿ ವಿರುದ್ಧ ಬಿತ್ತು ಕೇಸ್‌

ದೀಪಾವಳಿ ಸಂದರ್ಭದಲ್ಲಿ ಗುಡ್‌ನ್ಯೂಸ್ ಹಂಚಿಕೊಂಡ ನಟ ರಾಮ್‌ ಚರಣ್, ಉಪಾಸನಾ ದಂಪತಿ

ಮುಂದಿನ ಸುದ್ದಿ
Show comments