Webdunia - Bharat's app for daily news and videos

Install App

ರೇಪ್ ಮಾಡುವ ಪುರುಷರಿಗೆ ಮಹಿಳೆಯರು ಕಾಂಡೋಮ್ ಕೊಟ್ಟು ಸಹಕರಿಸಬೇಕು ಎಂದು ಚಿತ್ರ ನಿರ್ಮಾಪಕ!

Webdunia
ಬುಧವಾರ, 4 ಡಿಸೆಂಬರ್ 2019 (15:55 IST)
ಮುಂಬೈ: ರೇಪ್ ಮಾಡುವ ಪುರುಷರ ಕಾಮದಾಹ ತೀರಿಸಲು ಮಹಿಳೆಯರು ಸಹಕರಿಸಬೇಕು. ಅದಕ್ಕಾಗಿ ಅವರು ದಿನವೂ ತಮ್ಮ ಬ್ಯಾಗ್ ನಲ್ಲಿ ಕಾಂಡೋಮ್ ಇಟ್ಟುಕೊಂಡರೆ ಸಾಕು. ಒಂದು ವೇಳೆ ಇಂತಹ ಪುರುಷರಿಗೆ ಸಹಕರಿಸಿದರೆ ಅವರ ಬಯಕೆ ತೀರಿದ ಬಳಿಕ ಕೊಲೆ ಮಾಡದೇ ಬಿಟ್ಟು ಬಿಡುತ್ತಾರೆ!


ಹೀಗೊಂದು ಐಡಿಯಾ ಕೊಟ್ಟಿದ್ದು ಒಬ್ಬ ಸಿನಿಮಾ ನಿರ್ಮಾಪಕ! ಡೇನಿಯಲ್ ಶ್ರವಣ್ ಎಂಬ ಚಿತ್ರ ನಿರ್ಮಾಪಕ ತನ್ನ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಮಾಡಿ ಪೈಶಾಚಿಕವಾಗಿ ಕೊಲೆ ಮಾಡುವ ದುರುಳರಿಂದ ರಕ್ಷಿಸಿಕೊಳ್ಳಲು ಇಂತಹದ್ದೊಂದು ಐಡಿಯಾ ಬರೆದುಕೊಂಡಿದ್ದಾರೆ. ಇದನ್ನು ಓದಿದ ಜನ ಈಗ ಚಿತ್ರ ನಿರ್ಮಾಪಕನನ್ನು ಹಿಗ್ಗಾ ಮುಗ್ಗಾ ಬೈಯುತ್ತಿದ್ದಾರೆ.

‘ಕೊಲೆ ಮಾಡದೇ ಕೇವಲ ಅತ್ಯಾಚಾರ ಮಾಡುವುದನ್ನು ಸರ್ಕಾರ ಕಾನೂನುಬದ್ಧಗೊಳಿಸಬೇಕು. 18 ಕ್ಕಿಂತ ಮೇಲ್ಪಟ್ಟ ವಯಸ್ಸಿನ ಹುಡುಗಿಯರಿಗೆ ಅತ್ಯಾಚಾರದ ಬಗ್ಗೆ ಶಿಕ್ಷಣ ನೀಡಬೇಕು. ಉದಾಹರಣೆಗೆ ಹುಡುಗಿಯರು ಪುರುಷರ ಲೈಂಗಿಕ ಬಯಕೆಯನ್ನು ತಡೆಯಬಾರದು. ಆಗಲೇ ಇಂತಹ ಕೊಲೆ ಪ್ರಕರಣವನ್ನು ನಿಲ್ಲಿಸಲು ಸಾಧ್ಯ. ವೀರಪ್ಪನ್ ಕೊಂದಿದ್ದರಿಂದ ಕಳ್ಳಸಾಗಣೆ ತಡೆಯಲು ಸಾಧ‍್ಯವಾಗಿಲ್ಲ, ಲಾಡೆನ್ ಕೊಂದ ಮಾತ್ರಕ್ಕೆ ಉಗ್ರವಾದ ನಿಲ್ಲಲಿಲ್ಲ. ಅದೇ ರೀತಿ ನಿರ್ಭಯಾ ಅಪರಾಧಿಗಳಿಗೆ ಶಿಕ್ಷೆ ಜಾರಿ ಮಾಡಿರುವುದರಿಂದ ಅತ್ಯಾಚಾರ ನಿಲ್ಲಲಿಲ್ಲ. ವಿಶೇಷವಾಗಿ ಭಾರತೀಯ ಮಹಿಳೆಯರಿಗೆ ತಿಳುವಳಿಕೆ ನೀಡಬೇಕು (18 ವಯಸ್ಸು ದಾಟಿದ ಮೇಲೆ ಕಾಂಡೋಮ್ ಬ್ಯಾಗ್ ನಲ್ಲಿಟ್ಟುಕೊಂಡು ಹೋಗುವುದು ಇತ್ಯಾದಿ) ಇದು ತುಂಬಾ ಸಿಂಪಲ್ ಲಾಜಿಕ್. ಪುರುಷರ ಲೈಂಗಿಕ ಬಯಕೆ ಈಡೇರಿದರೆ ಅವರು ಮತ್ತೆ ಆ ಮಹಿಳೆಯನ್ನು ಕೊಲೆ ಮಾಡಲ್ಲ. ಸರ್ಕಾರ ಇದು ಕಾನೂನುಬದ್ಧಗೊಳಿಸಬೇಕು’ ಎಂದು ಸುದೀರ್ಘವಾಗಿ ಡೇನಿಯಲ್ ಬರೆದುಕೊಂಡಿದ್ದಾರೆ.

ಇವರ ಈ ಐಡಿಯಾ ಓದಿದ ಜನ ಮೊದಲು ಇಂತಹಾ ಮೆಂಟಾಲಿಟಿಯ ಜನರನ್ನು ಸರ್ಕಾರ ಸ್ವಯಂಪ್ರೇರಿತವಾಗಿ ಮಾನಸಿಕ ತಜ್ಞರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು. ಇಂತಹ ಮೆಂಟಾಲಿಟಿ ಇರುವವರಿಂದಲೇ ಸಮಾಜ ಹಾಳಾಗುತ್ತಿರುವುದು. ಪೈಶಾಚಿಕ ಕೃತ್ಯ ಎಸಗುತ್ತಿರುವ ಪುರುಷರ ಸಾಲಿನಲ್ಲಿ ಈತನೂ ಇರುವುದು ಈ ಮೂಲಕ ಗ್ಯಾರಂಟಿಯಾಯಿತು ಎಂದೆಲ್ಲಾ ಚೆನ್ನಾಗಿಯೇ ಉಗಿದು ನಿರ್ಮಾಪಕನ ಬೆವರಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Arbaaz Khan: ಎರಡನೇ ಪತ್ನಿಯಿಂದ ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಬಾಲಿವುಡ್‌ನ ಈ ನಟ

ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್‌ ಪತ್ತೆ: ಖ್ಯಾತ ಗಾಯಕಿ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲು

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

ಮುಂದಿನ ಸುದ್ದಿ