Select Your Language

Notifications

webdunia
webdunia
webdunia
webdunia

ಮಂಡ್ಯ ಲೋಕಸಭಾ ರಣಾಂಗಣದ ಎಫೆಕ್ಟ್ ‘ಕುರುಕ್ಷೇತ್ರ’ ಸಿನಿಮಾ ಮೇಲೆ?! ದರ್ಶನ್-ನಿಖಿಲ್ ಸಿನಿಮಾ ಗತಿ ಏನು?

ಮಂಡ್ಯ ಲೋಕಸಭಾ ರಣಾಂಗಣದ ಎಫೆಕ್ಟ್ ‘ಕುರುಕ್ಷೇತ್ರ’ ಸಿನಿಮಾ ಮೇಲೆ?! ದರ್ಶನ್-ನಿಖಿಲ್ ಸಿನಿಮಾ ಗತಿ ಏನು?
ಮಂಡ್ಯ , ಬುಧವಾರ, 27 ಮಾರ್ಚ್ 2019 (08:51 IST)
ಮಂಡ್ಯ: ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವಿನ ಸ್ಪರ್ಧೆಯಿಂದ ಇದೀಗ ಸ್ಯಾಂಡಲ್ ವುಡ್ ಎರಡು ಮನೆಯಾಗಿದಂತಾಗಿದೆ.


ಇದರ ನೇರ ಇಫೆಕ್ಟ್ ಆಗಿರುವುದು ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ’ ಸಿನಿಮಾ ಮೇಲೆ ಎಂದರೂ ತಪ್ಪಾಗಲಾರದು. ಕಾಂಗ್ರೆಸ್ ಶಾಸಕರೂ ಆಗಿರುವ ಮುನಿರತ್ನ  ನಿರ್ಮಾಣದ ಕುರುಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಗೆ ಬೆಂಬಲವಾಗಿ ನಿಂತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿಖಿಲ್ ಕುಮಾರಸ್ವಾಮಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ನಿರ್ಮಾಪಕ ಮುನಿರತ್ನ ತಮ್ಮ ಪಕ್ಷದ ಮೇಲೆ ನಿಷ್ಠೆ ತೋರಿದ್ದು, ಸುಮಲತಾ ಪರ ನಿಲ್ಲದೇ ನಿಖಿಲ್ ಪರವಾಗಿ ಮಂಡ್ಯದಲ್ಲಿ ಬೆಂಬಲ ಘೋಷಿಸಿದ್ದಾರೆ. ಇತ್ತ ಮುನಿರತ್ನ ಸಂಬಂಧಿಯೂ ಆದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸುಮಲತಾ ಬೆನ್ನಿಗೆ ನಿಂತಿದ್ದಾರೆ.

ಇವರೆಲ್ಲರ ರಾಜಕೀಯ ಜಂಜಾಟದ ನಡುವೆ ಕುರುಕ್ಷೇತ್ರ ಸಿನಿಮಾ ಬಿಡುಗಡೆ ಮತ್ತಷ್ಟು ಕಗ್ಗಂಟಾಗುವ ನಿರೀಕ್ಷೆಯಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಿಖಿಲ್ ಅಭಿನಯಿಸಿರುವ ಕಾರಣಕ್ಕೆ ಕುರುಕ್ಷೇತ್ರ ಸದ್ಯಕ್ಕೆ ಬಿಡುಗಡೆಯಾಗದು. ಆದರೆ ಅದರ ಜತೆಗೆ ಇದೀಗ ರಾಜಕೀಯ ವೈಷಮ್ಯವೂ ಸೇರಿಕೊಂಡಿದ್ದು, ಐತಿಹಾಸಿಕ ಚಿತ್ರದ ಪಾಡು ಏನಾಗಬಹುದು ಎಂದು ಕಾದು ನೋಡಬೇಕಷ್ಟೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಹಾರಿದ ‘ಬೆಲ್ ಬಾಟಂ’ ಡಿಟೆಕ್ಟಿವ್ ದಿವಾಕರ!