ಗುಂಡನ ಕಥೆ ಮೆಚ್ಚಿದ ಅಭಿನಯ ಚಕ್ರವರ್ತಿ!

Webdunia
ಮಂಗಳವಾರ, 28 ಜನವರಿ 2020 (12:29 IST)
ನಾನು ಮತ್ತು ಗುಂಡ, ಸ್ಯಾಂಡಲ್ ವುಡ್‌ನಲ್ಲಿ‌ ಪ್ರಾಣಿ‌ ಮತ್ತು ಮನುಷ್ಯ ನಡುವಿನ ಸಂಬಂಧ ಎಂತದ್ದು ಅನ್ನೋದನ್ನ ತುಂಬಾ ಅಚ್ಚು ಕಟ್ಟಾಗಿ‌‌ ಕೊಟ್ಟಿರೋ ಸಿನಿಮಾವಿದು. ಕಾಮಿಡಿ‌ ಕಿಲಾಡಿ ಖ್ಯಾತಿಯ ಶಿವರಾಜ್ ಕೆಆರ್ ಪೇಟೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರೋ ಚಿತ್ರ. ಈಗಾಗ್ಲೇ ಥಿಯೇಟರ್ ನಲ್ಲಿ ಕಮಾಲ್ ಮಾಡ್ತಿರೋ ಗುಂಡನ ಕಥೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಒಳ್ಳೆ ಕಥೆ, ಸೂಪರ್ ಸಿನಿಮಾ ಅಂತೆಲ್ಲಾ ಚಿತ್ರಕ್ಕೆ ರೆಸ್ಪಾನ್ಸ್ ಸಿಕ್ತಿದೆ.
ಕಳೆದ ಶುಕ್ರವಾರವಷ್ಟೇ ರಿಲೀಸ್ ಆಗಿರೋ ಸಿನಿಮಾಕ್ಕೆ ರಾಜ್ಯಾದ್ಯಂತ ಪ್ರಶಂಸೆ‌ ದೊರೆಯುತ್ತಿದೆ. ಈ ನೈಜ ಘಟನೆಯಾಧಾರಿತ ಗುಂಡನ ಕಥೆಗೆ ಸುದೀಪ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಬಗ್ಗೆ ಉತ್ತಮ‌ ಮಾತು ಕೇಳಿ ಬರ್ತಿದೆ. ಸಿನಿಮಾ ತಂಡಕ್ಕೆ ಶುಭವಾಗಲಿ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ನಾನು ಮತ್ತು ಗುಂಡನ ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ ಅಭಿನಯ ಚಕ್ರವರ್ತಿ.
 
ಇನ್ನು, ಶಿವರಾಜ್ ಕೆ ಆರ್ ಪೇಟೆ ಜೊತೆ ಗೋವಿಂದೇಗೌಡ, ಸಂಯುಕ್ತ ಹೊರನಾಡು, ಸಿಂಬಾ ಅನ್ನೋ ನಾಯಿ ಅದ್ಭುತವಾಗಿ‌ ನಟಿಸಿದ್ದಾರೆ. ಚಿತ್ರಕ್ಕೆ ರಘು ಹಾಸನ್ ನಿರ್ದೇಶನ‌ ಮಾಡಿದ್ದು, ಶ್ರೀನಿವಾಸ್ ತಿಮ್ಮಯ್ಯ ಬಂಡವಾ ಹೂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Renukaswamy Case: ತಿಂಗಳ ಬಳಿಕ ದರ್ಶನ್ ಕಂಡಿದ್ದು ಹೀಗೇ

Darshan Court Case Hearing: ಮುಕ್ತಾಯಗೊಂಡ ದೋಷಾರೋಪ, ಇಲ್ಲಿದೆ ಮಹತ್ವದ ಅಪ್ಡೇಟ್

ಕೋರ್ಟ್ ಹಾಲ್ ನಲ್ಲಿ ಸುಬ್ಬ ಮೀಟ್ಸ್ ಸುಬ್ಬಿ: ದರ್ಶನ್ ನೋಡಿ ಪವಿತ್ರಾ ಗೌಡ ಮಾಡಿದ್ದೇನು

ದರ್ಶನ್ ಫ್ಯಾನ್ಸ್ ನಿಂದ ನ್ಯಾಯಾಧೀಶರೇ ಗರಂ: ಮಹತ್ವದ ತೀರ್ಮಾನಕ್ಕೆ ಸಿದ್ಧತೆ video

ಕಾಂಚನಾ ಭಾಗ 4ರಲ್ಲಿ ಚಾನ್ಸ್‌ ಗಿಟ್ಟಿಸಿಕೊಂಡ ಪೂಜಾ ಹೆ‌ಗ್ಡೆ, ಬಾಲಿವುಡ್ ನಟಿಗೂ ಬಿಗ್ ರೋಲ್‌

ಮುಂದಿನ ಸುದ್ದಿ
Show comments