Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಬಿಜೆಪಿಗೆ! ಇಂದು ಮಹತ್ವದ ಸುದ್ದಿಗೋಷ್ಠಿ

ಕಿಚ್ಚ ಸುದೀಪ್ ಬಿಜೆಪಿಗೆ! ಇಂದು ಮಹತ್ವದ ಸುದ್ದಿಗೋಷ್ಠಿ
ಬೆಂಗಳೂರು , ಬುಧವಾರ, 5 ಏಪ್ರಿಲ್ 2023 (08:20 IST)
ಬೆಂಗಳೂರು: ಅಭಿನಯದ ಮೂಲಕ ಸಾವಿರಾರು ಜನರ ಮನಗೆದ್ದಿರುವ ಕಿಚ್ಚ ಸುದೀಪ್ ಈಗ ರಾಜಕೀಯಕ್ಕೆ ಕಾಲಿಡುವ ಸುದ್ದಿ ಬಂದಿದೆ.

ಚುನಾವಣೆ ಹೊಸ್ತಿಲಲ್ಲಿ ಸಿನಿಮಾ ಸೆಲೆಬ್ರಿಟಿಗಳು ರಾಜಕೀಯ ಅಖಾಡಕ್ಕಿಳಿಯುವ ಹೊಸತೇನಲ್ಲ. ಈಗ ಕಿಚ್ಚ ಸುದೀಪ್ ಕೂಡಾ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ.

ಕಿಚ್ಚ ಸುದೀಪ್ ವಿವಿಧ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಆತ್ಮೀಯತೆಯಿದೆ. ಅದರಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಅವರ ಸಂಬಂಧ ವಿಶೇಷವಾಗಿದೆ. ಇದೇ ಆಪ್ತತೆಯಿಂದ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಯಿದೆ. ಇಂದು ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಲಿದ್ದು, ಅದರಲ್ಲಿ ಸುದೀಪ್ ಕೂಡಾ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಅವರು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುತ್ತಾರೋ, ಸ್ಟಾರ್ ಪ್ರಚಾರಕನಾಗಿ ಇರುತ್ತಾರೋ ಕಾದು ನೋಡಬೇಕಿದೆ. ಕೆಲವು ದಿನಗಳ ಮೊದಲು ಡಿಕೆ ಶಿವಕುಮಾರ್ ಜೊತೆ ಕಾಣಿಸಿಕೊಂಡಿದ್ದರಿಂದ ಸುದೀಪ್ ಕಾಂಗ್ರೆಸ್ ಸೇರಲಿದ್ದಾರೆ ಎಂದು ಸುದ್ದಿಯಾಗಿತ್ತು. ಬಳಿಕ ಇದನ್ನು ಸ್ವತಃ ಸುದೀಪ್ ಅಲ್ಲಗಳೆದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಗಂಡನ ಡೇಟಿಂಗ್ ಬಗ್ಗೆ ನಾನೇನೂ ಹೇಳಿಲ್ಲ: ಸಮಂತಾ ಋತು ಪ್ರಭು