Select Your Language

Notifications

webdunia
webdunia
webdunia
webdunia

ಸ್ವಲ್ಪದರಲ್ಲೇ ಬಚಾವಾದ ಕಿಚ್ಚ ಸುದೀಪ್

ಸ್ವಲ್ಪದರಲ್ಲೇ ಬಚಾವಾದ ಕಿಚ್ಚ ಸುದೀಪ್
Belagavi , ಬುಧವಾರ, 24 ಮೇ 2017 (12:03 IST)
ಬೆಳಗಾವಿ: ‘ದಿ ವಿಲನ್’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬಿರುಗಾಳಿ ಸಹಿತ ಮಳೆಯಾಗಿದ್ದು, ನಟ ಸುದೀಪ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

 
ಅನಿರೀಕ್ಷಿತವಾಗಿ ಬೀಸಿದ ಗಾಳಿಯಿಂದ ಅಡಹಳ್ಳಿ ಬಳಿ ರಾಮತೀರ್ಥ ಗ್ರಾಮದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಸೆಟ್ ನಲ್ಲಿ ಎತ್ತರ ಪ್ರದೇಶದಲ್ಲಿ ಶೆಡ್ ಹಾಕಲಾಗಿತ್ತು. ಶೆಡ್ ಬಡಿದು ಸಹನಟನೊಬ್ಬನ ತಲೆಗೆ ಗಾಯವಾಗಿದೆ. ಈ ಸಂದರ್ಭದಲ್ಲಿ ಸುದೀಪ್ ಮತ್ತು ನಿರ್ದೇಶಕ ಪ್ರೇಮ್ ಪಕ್ಕದಲ್ಲೇ ಇದ್ದರು.

ಆದರೆ ಸುದೀಪ್ ತಕ್ಷಣ ಓಡಿ ವಿಶ್ರಾಂತಿ ಬಸ್ ನಲ್ಲಿ ಆಶ್ರಯ ಪಡೆದರು. ಹೀಗಾಗಿ ಅಪಾಯವಿಲ್ಲದೇ ಪಾರಾದರು. ಅನಿರೀಕ್ಷಿತವಾಗಿ ಬೀಸಿದ ಗಾಳಿಗೆ ಪೆಂಡಾಲ್ ಗಳೆಲ್ಲಾ ಕಿತ್ತು ಹೋಗಿವೆ. ಇನ್ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ರಜಿನಿಕಾಂತ್`ಗೆ ಆಹ್ವಾನ ನೀಡಿದ ಅಮಿತ್ ಶಾ