Select Your Language

Notifications

webdunia
webdunia
webdunia
webdunia

ರಜಿನಿಕಾಂತ್`ಗೆ ಆಹ್ವಾನ ನೀಡಿದ ಅಮಿತ್ ಶಾ

ರಜಿನಿಕಾಂತ್`ಗೆ ಆಹ್ವಾನ ನೀಡಿದ ಅಮಿತ್ ಶಾ
ನವದೆಹಲಿ , ಬುಧವಾರ, 24 ಮೇ 2017 (11:27 IST)
ಸೂಪರ್ ಸ್ಟಾರ್ ರಜಿನಿಕಾಂತ್ ರಾಜಕೀಯ ಪ್ರವೇಶದ ಸೂಚನೆ ನೀಡುತ್ತಿದ್ದಂತೆ ತಲ್ಲಣ ಶುರುವಾಗಿದೆ. ತಮಿಳುನಾಡಿನ ಸ್ಥಳೀಯ ಪಕ್ಷಗಳಿಗೂ ಸಹ ತಲೈವಾ ನಿರ್ಧಾರ ಅರಗಿಸಿಕೊಳ್ಲಲಾಗುತ್ತಿಲ್ಲ. ಈ ಮಧ್ಯೆ, ದಕ್ಷಿಣದಲ್ಲಿ ಕೇಸರಿ ಬಾವುಟ ಹಾರಿಸಲು ಮುಂದಾಗಿದ್ದ ಬಿಜೆಪಿಗೂ ಇದು ರೆಡ್ ಸಿಗ್ನಲ್. ಹೀಗಾಗಿ, ರಜಿನಿಕಾಂತ್ ಅವರಿಗೆ ತಮ್ಮ ಪಕ್ಷಕ್ಕೇ ಆಹ್ವಾನ ನೀಡಿದ್ದಾರೆ ಅಮಿತ್ ಶಾ.
 

ಸುದ್ದಿಗಾರರ ಜೊತೆ ಮಾತನಾಡಿರುವ ಅಮಿತ್ ಶಾ, ಎಲ್ಲ ಉತ್ತಮ ಜನರನ್ನ ಪಕ್ಷಕ್ಕೆ ಆಹ್ವಾನಿಸುತ್ತೇವೆ. ಅಂತಿಮ ನಿರ್ಧಾರವನ್ನ ರಜಿನಿಕಾಂತ್`ಜಿ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಪಕ್ಷ ನೆಲೆ ಸದೃಢವಾಗಿಲ್ಲ. ಕೇಂದ್ರದ ಪಾಲಿಸಿಗಳು ಮತ್ತು ಕಾರ್ಯಕ್ರಮಗಳನ್ನ ಜನರಿಗೆ ತಿಳಿಸಿ ಪಕ್ಷದ ಬಲವರ್ಧನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ರಜಿನಿಕಾಂತ್ ತಮಗೆ ಸೂಕ್ತ ಜಾಗ ಯಾವುದು ಎಂಬ ಬಗ್ಗೆ ಯೋಚಿಸಬೇಕಿದೆ. ಬಿಜೆಪಿ ಬಗ್ಗೆ ರಜಿನಿಕಾಂತ್ ಯೋಚಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಅವರಿಗೆ ಸೂಕ್ತ ಜಾಗ ಬಿಜೆಪಿಯಲ್ಲಿದೆ ಎಂದು ಎರಡು ದಿನಗಳ ಹಿಂದಷ್ಟೇ  ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದರು. ಇದರ ಬೆನ್ನಲ್ಲೇ ಅಮಿತ್ ಶಾ ರಜಿನಿಗೆ ವೆಲ್ ಕಂ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ತೆಂಡುಲ್ಕರ್ ಸಿನಿಮಾ ನೋಡಲಿರುವ ಭಾರತೀಯ ಕ್ರಿಕೆಟಿಗರು