Select Your Language

Notifications

webdunia
webdunia
webdunia
webdunia

ಧ್ರುವ ಸಾವಿಗೆ ಕಂಬನಿ ಮಿಡಿದ ಕಿಚ್ಚ ಸುದೀಪ್

ಧ್ರುವ ಸಾವಿಗೆ ಕಂಬನಿ ಮಿಡಿದ ಕಿಚ್ಚ ಸುದೀಪ್
ಬೆಂಗಳೂರು , ಬುಧವಾರ, 2 ಆಗಸ್ಟ್ 2017 (08:45 IST)
ಬೆಂಗಳೂರು: ಸೆಲೆಬ್ರೆಟಿ ಕ್ರಿಕೆಟ್ ಲೀಗ್ ನಲ್ಲಿ ಕಿಚ್ಚ ಸುದೀಪ್ ಬಲಗೈ ಬಂಟನಂತಿದ್ದ, ನಂಬಿಕಸ್ಥ ಆಟಗಾರ ಧ್ರುವ. ಅಂತಹ ಆಟಗಾರ ಇನ್ನಿಲ್ಲ ಎಂಬ  ದುಃಖದಲ್ಲಿದ್ದಾರೆ ಸುದೀಪ್.


ಟ್ವಿಟರ್ ನಲ್ಲಿ ಸಹವರ್ತಿಯ ಸಾವಿಗೆ ಕಂಬನಿ ಮಿಡಿದಿರುವ ಸುದೀಪ್ ‘ನೀನು ಇಲ್ಲ ಎಂಬುದನ್ನು ಅರಗಿಸಿಕೊಳ್ಳಲೇ ಆಗುತ್ತಿಲ್ಲ. ಉಸಿರಾಡದೆ ನಿದ್ರೆ ಮಾಡಿದಂತೆ ಆತ ಮಲಗಿರುವುದನ್ನು ನೋಡಕು ಹೃದಯ ಛಿದ್ರವಾಗುತ್ತದೆ. ನೀನು ಒಬ್ಬ ಶ್ರೇಷ್ಠ ವ್ಯಕ್ತಿ. ಯಾವತ್ತೂ ನಮ್ಮ ಹೃದಯದಲ್ಲಿರುತ್ತೀಯಾ’ ಎಂದು ಕಿಚ್ಚ ಸುದೀಪ್ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.

ಧ್ರುವ ಮೃತದೇಹ ನೋಡಲು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಧಾವಿಸಿದ್ದ ಕಿಚ್ಚ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಸುದೀಪ್ ಅಲ್ಲದೆ, ಜಗ್ಗೇಶ್ ಸೇರಿದಂತೆ ಚಿತ್ರರಂಗದ ಗಣ್ಯರೆಲ್ಲಾ ಧ್ರುವ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ ನಟಿ ಜೊತೆ ಅಸಭ್ಯ ವರ್ತನೆ ತೋರಿದವನಿಗೆ ಕಪಾಳಮೋಕ್ಷ...?!