Select Your Language

Notifications

webdunia
webdunia
webdunia
webdunia

ಗೆಳೆಯನಲ್ಲದಿದ್ದರೇನು? ದರ್ಶನ್ ಬೆನ್ನುತಟ್ಟಿದ ಕಿಚ್ಚ ಸುದೀಪ್!

ದರ್ಶನ್
ಬೆಂಗಳೂರು: ದರ್ಶನ್ ಮತ್ತು ಕಿಚ್ಚ ಸುದೀಪ್ ನಾವು ಗೆಳೆಯರಲ್ಲ ಎಂದು ಪರಸ್ಪರ ಕಿತ್ತಾಡಿಕೊಂಡಿದ್ದು ಹಳೆಯ ವಿಷಯ. ಇದೀಗ ದರ್ಶನ್ ಸಿನಿಮಾಗೆ ಕಿಚ್ಚ ಶುಭಹಾರೈಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 
ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ಕಾಣಿಸಿಕೊಳ್ಳುತ್ತಿರುವ ಕುರುಕ್ಷೇತ್ರ ಚಿತ್ರಕ್ಕೆ ಸುದೀಪ್ ಟ್ವಿಟರ್ ಮೂಲಕ ಶುಭಹಾರೈಸಿದ್ದಾರೆ.

ದೊಡ್ಡ ಚಿತ್ರವೊಂದು ನಿರ್ಮಾಣವಾಗುತ್ತಿರುವುದು ನಿಜಕ್ಕೂ ಅದ್ಭುತ. ನನ್ನ ಪ್ರೀತಿಯ ನಿರ್ಮಾಪಕ ಮುನಿರತ್ನಗೆ ಅಭಿನಂದನೆಗಳು. ಈ ಸಿನಿಮಾ ಮೂಲಕ ದರ್ಶನ್ ವೃತ್ತಿ ಜೀವನಕ್ಕೆ ಮತ್ತೊಂದು ಗರಿ ಮೂಡುವುದಂತೂ ನಿಜ ಎಂದು ಕಿಚ್ಚ ಟ್ವೀಟ್ ಮೂಲಕ ಹಳೆಯ ಗೆಳೆಯ ಬೆನ್ನುತಟ್ಟಿದ್ದಾರೆ.

ಇದನ್ನೂ ಓದಿ.. ರಾಜ್ಯಸಭೆ ಚುನಾವಣೆ ಗೆಲ್ಲಲೇ ಬೇಕೆಂಬ ಜಿದ್ದು ಬಿಜೆಪಿಗೇಕೆ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕುತೂಹಲ ಸೃಷ್ಟಿಸಿದ ರಜನೀಕಾಂತ್-ಬಿಜೆಪಿ ನಾಯಕರ ಭೇಟಿ