Webdunia - Bharat's app for daily news and videos

Install App

ಕೆಸಿಸಿ ಟೂರ್ನಿಯಲ್ಲಿ ದರ್ಶನ್, ಯಶ್ ಯಾಕಿಲ್ಲ ಎಂದಾಗ ಗರಂ ಆದ ಕಿಚ್ಚ ಸುದೀಪ್

Webdunia
ಗುರುವಾರ, 14 ಡಿಸೆಂಬರ್ 2023 (10:10 IST)
Photo Courtesy: Twitter
ಬೆಂಗಳೂರು: ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ಟೂರ್ನಿಯಲ್ಲಿ ಯಶ್, ದರ್ಶನ್ ಯಾಕೆ ಭಾಗಿಯಾಗುತ್ತಿಲ್ಲ ಎಂದು ಕೇಳಿದಾಗ ಕಿಚ್ಚ ಸುದೀಪ್ ಗರಂ ಆದರು.

ಕಿಚ್ಚ ಸುದೀಪ್ ನೇತೃತ್ವದಲ್ಲಿ ಕೆಸಿಸಿ ಟೂರ್ನಿ ನಡೆಯುತ್ತಿದೆ. ಈ ಟೂರ್ನಮೆಂಟ್ ನಲ್ಲಿ ದರ್ಶನ್, ಯಶ್, ಶೆಟ್ಟಿ ಗ್ಯಾಂಗ್ ಭಾಗವಹಿಸುವುದಿಲ್ಲ. ಈ ಬಗ್ಗೆ ಕಿಚ್ಚನಿಗೆ ಮಾಧ‍್ಯಮಗೋಷ್ಠಿಯಲ್ಲಿ ಪ್ರಶ್ನೆ ಎದುರಾಯ್ತು.

ಮೊದಲು ರಾಜ್ ಬಿ ಶೆಟ್ಟಿ, ರಿಷಬ್, ರಕ್ಷಿತ್ ಶೆಟ್ಟಿ ಯಾಕೆ ಭಾಗಿಯಾಗುತ್ತಿಲ್ಲ ಎಂದು ಪ್ರಶ್ನೆ ಬಂತು. ಆಗ ಉತ್ತರಿಸಿದ ಸುದೀಪ್, ಅವರನ್ನು ಕರೆದಿದ್ದೇವೆ. ಆದರೆ ಹಾಗೇ ಬಂದು ಹೋಗುತ್ತೇವೆ, ಕ್ರಿಕೆಟ್ ಆಡಲ್ಲ ಅಂತಾರೆ. ಅವರೆಲ್ಲಾ ನಮ್ಮ ಹುಡುಗರು. ಟೆನಿಸ್ ಬಾಲ್ ನಲ್ಲಿ ಕ್ರಿಕೆಟ್ ಆಡುವುದು ಬೇರೆ. ಲೆದರ್ ಬಾಲ್ ನಲ್ಲಿ ಆಡುವಾಗ ಪ್ರಾಕ್ಟೀಸ್ ಬೇಕಾಗುತ್ತದೆ. ಆದರೆ ಅವರು ಕ್ರಿಕೆಟ್ ಆಡಲ್ಲ. ರಿಷಬ್ ಬರ್ತೀನಿ, ಬರ್ತೀನಿ ಅಂತಾರೆ ಆದರೆ ಆಡಲ್ಲ. ಇನ್ನು, ರಾಜ್ ಬಿ ಶೆಟ್ಟಿ ಗರುಡಗಮನ ಸಿನಿಮಾದಲ್ಲಿ ಅಡಿದ್ದೇನಲ್ಲಾ ಅಷ್ಟೇ ಅಂತಾರೆ. ರಕ್ಷಿತ್ ಕ್ರಿಕೆಟ್ ನ ಮೊದಲ ಅಕ್ಷರ ಕೇಳಿದಾಗಲೇ ಇಲ್ಲ ಅಂತಾರೆ. ಹಾಗಾಗಿ ಅವರನ್ನೆಲ್ಲಾ ಬನ್ನಿ ಎಂದು ಒತ್ತಾಯಿಸುವುದು ಹೇಗೆ? ಎಂದಿದ್ದಾರೆ.

ನಂತರ ಯಶ್ ಮತ್ತು ದರ್ಶನ್ ಬರಲ್ವಾ ಎಂಬ ಪ್ರಶ್ನೆ ಬಂದಾಗ ಸುದೀಪ್ ಕೊಂಚ ಗರಂ ಆದರು. ನಾವು ಎಲ್ಲರನ್ನೂ ಕರೆದಿದ್ದೇವೆ. ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಕೆಸಿಸಿ ಟೂರ್ನಿ ನನ್ನೊಬ್ಬನದಲ್ಲ. ನಾವು ಯಾರಿಗೂ ಪ್ರತ್ಯೇಕವಾಗಿ ಕರೆಯಬೇಕಾಗಿಲ್ಲ. ಕೆಸಿಸಿ ಎಂಬುದು ಬಲವಂತ ಅಲ್ಲ, ಗೌರವ. ಕೆಲವರು ಆಡಲು ಬರಲ್ಲ, ಗ್ರೌಂಡ್ ಗೆ ಬರ್ತೀವಿ ಅಂತಾರೆ. ನಾವು ಏನು ಮಾಡಕ್ಕಾಗುತ್ತದೆ?’ ಎಂದು ಸುದೀಪ್ ಮರು ಪ್ರಶ್ನಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments