Select Your Language

Notifications

webdunia
webdunia
webdunia
webdunia

ಅಣ್ಣ ಸೂರ್ಯನ ಈ ಕಾರ್ಯಕ್ಕೆ ಕೈಜೋಡಿಸಿದ ನಟ ಕಾರ್ತಿ

ಅಣ್ಣ ಸೂರ್ಯನ ಈ ಕಾರ್ಯಕ್ಕೆ ಕೈಜೋಡಿಸಿದ ನಟ ಕಾರ್ತಿ
ಚೆನ್ನೈ , ಮಂಗಳವಾರ, 22 ಸೆಪ್ಟಂಬರ್ 2020 (13:04 IST)
ಚೆನ್ನೈ : ರೈತರಿಗೆ ಸಹಾಯ ಮಾಡಲು ಹೊರಟ ಅಣ್ಣ ಸೂರ್ಯನ ಜೊತೆ ನಟ ಕಾರ್ತಿ ಕೂಡ ಕೈಜೋಡಿಸಿದ್ದು, ಎನ್ ಜಿಓ ಮೂಲಕ ಇಬ್ಬರು ಸಹೋದರರು ರೈತರಿಗೆ ಆರ್ಥಿಕ ನೆರವು ನೀಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ರೈತರ ಅನುಕೂಲಕ್ಕಾಗಿ ಏನಾದರೂ ಮಾಡಲು ಉತ್ಸುಕರಾಗಿದ್ದ ನಟ ಸೂರ್ಯ ಹಾಗೂ ನಟ ಕಾರ್ತಿ ಅದಕ್ಕಾಗಿಯೇ ಫೌಂಡೇಶನ್ ವೊಂದನ್ನು ಸ್ಥಾಪಿಸಿದ್ದರು. ಅದರ ಮೂಲಕ ನಟ ಸೂರ್ಯ  ಇತ್ತೀಚೆಗೆ ಉತ್ತಮ ರೈತರಿಗಾಗಿ ಪ್ರಶಸ್ತಿಗಳನ್ನು ನೀಡುವುದಾಗಿ ಘೋಷಿಸಿದ್ದಾರೆ.

ಅದರಂತೆ ಟಿವಿ ವಾಹಿನಿಯ ಸಹಯೋಗದೊಂದಿಗೆ ಉತ್ತಮ ರೈತರನ್ನು ಗೌರವಿಸಲಿದ್ದಾರೆ. ತಮಿಳುನಾಡಿನ ಡೆಲ್ಟಾ ಪ್ರದೇಶದ 5 ರೈತರನ್ನು ಆಯ್ಕೆ ಮಾಡಿ ಅವರಿಗೆ ತಲಾ 1 ಲಕ್ಷ ರೂ ನಗದು ಬಹುಮಾನ ನೀಡಿ ಗೌರವಿಸುವುದಾಗಿ ನಟ ಕಾರ್ತಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಅಭಿನಯದ ರಾಜಮದಕರಿ ಸಿನಿಮಾ ಶೂಟಿಂಗ್ ಮುಹೂರ್ತ ಫಿಕ್ಸ್